5 ವರ್ಷಗಳಲ್ಲಿ ಬೆಂಗಳೂರು ಬದುಕಲು ಸಾಧ್ಯವಿಲ್ಲದ ಸತ್ತ ನಗರವಾಗಲಿದೆ !
ಬೆಂಗಳೂರು : ಮುಂದಿನ ಐದು ವರ್ಷಗಳಲ್ಲಿ ಬೆಂಗಳೂರಿನ ಸ್ಥಿತಿ ಏನಾಗಬಹುದೆಂದು ಊಹಿಸಿದ್ದೀರಾ? ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಾಯನ್ಸ್ ನಡೆಸಿದ ಅಧ್ಯಯನವೊಂದು ಆತಂಕಕಾರಿ ಚಿತ್ರಣವನ್ನು ನಮ್ಮ ಮುಂದಿಡುತ್ತದೆ. ಕಳೆದ ನಾಲ್ಕು ದಶಕಗಳಲ್ಲಿ ಕಟ್ಟಡಗಳ ಸಂಖ್ಯೆ 525% ಹೆಚ್ಚಾಗಿದ್ದರೆ,ಹಸಿರು ಪ್ರದೇಶದಲ್ಲಿ 78% ಹಾಗೂ ನೀರಿನ ಮೂಲಗಳಲ್ಲಿ 79% ಕುಸಿತ ಕಂಡು ಬಂದಿವೆ. ಇವು ಕೇವಲ ಅಂಕಿ ಸಂಖ್ಯೆಗಳಲ್ಲ, ಬದಲಾಗಿ ವಾಸ್ತವ.
ನಗರದಲ್ಲಿದ್ದ ಹಲವಾರು ಗಿಡ, ಮರಗಳು ಹಾಗೂಕೆರೆಗಳು ಈಗ ಮಾಯವಾಗಿವೆ.
ಬೆಂಗಳೂರಿನ ಬೆಳವಣಿಗೆಯನ್ನು ‘ಪ್ರಜ್ಞಾಶೂನ್ಯ ಬೆಳವಣಿಗೆ’ ಎಂದು ಹೇಳುವ ಐಐಎಸ್ಸಿಯ ಸೆಂಟರ್ ಫಾರ್ ಇಕಲಾಜಿಕಲ್ಸ್ಟಡೀಸ್ ನ ಪ್ರೊ. ಟಿ. ವಿ. ರಾಮಚಂದ್ರ ರಾವ್ನಾವುತಿನ್ನುವ ಆಹಾರ ಕಲಬೆರಕೆಯಿಂದ ಕೂಡಿರುವಾಗ ನಾವು ಹೆಚ್ಚು ಸಂಪಾದಿಸಿ ಏನು ಪ್ರಯೋಜನ ಎಂದು ಪ್ರಶ್ನಿಸುತ್ತಾರೆ.‘‘ಯೋಜನಾರಹಿತ ನಗರೀಕರಣದಿಂದಾಗಿ ಬೆಂಗಳೂರು ಮುಂದಿನ ಐದು ವರ್ಷಗಳಲ್ಲಿ ಸತ್ತ ನಗರವಾಗಲಿದೆ’’ಎಂದು ಅವರು ಎಚ್ಚರಿಸುತ್ತಾರೆ.
ಹಿಂದೆಹೆಚ್ಚಿನವರು ವಾಸಿಸಲಿಚ್ಛಿಸುವ ನಗರ ಬೆಂಗಳೂರಾಗಿತ್ತಲ್ಲದೆ ಬೆಂಗಳೂರಿನ ಹವೆ, ಅಲ್ಲಿನ ವಾತಾವರಣ ಹಾಗೂ ಆರ್ಥಿಕತೆ ಎಲ್ಲರಿಗೂ ಅಚ್ಚುಮೆಚ್ಚಾಗಿತ್ತು.
ನಗರಾಭಿವೃದ್ಧಿ ತಜ್ಞ ಅಶ್ವಿನ್ ಮಹೇಶ್ ಈಗಿನ ಸಮಸ್ಯಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು ದೂರುತ್ತಾರೆ. ಬಿಡಿಎ ಭ್ರಷ್ಟ ರಾಜಕಾರಣಿಗಳಿಗೆ ಅನುಕೂಲವಾಗುವಂತೆ ಭೂ ಒಪ್ಪಂದಗಳನ್ನು ಮಾಡುತ್ತವೆ. ಅದನ್ನು ಮುಚ್ಚಬೇಕೆಂದು ಜನ ಬಯಸುತ್ತಾರೆ, ಎಂದು ಅವರು ಹೇಳಿದರು.
‘‘ಬೆಂಗಳೂರುಈಗ ಬೆಳೆಯುತ್ತಿರುವ ವೇಗವನ್ನು ಪರಿಗಣಿಸಿದಾಗ ಮುಂದಿನ ಸಮಸ್ಯೆಗಳ ಬಗ್ಗೆ ಸರಕಾರ ಯೋಚಿಸಿಯೇ ಇಲ್ಲ. ಭೂಮಿ ಹಾಗೂ ಜಲ ಬಳಕೆ ಕುರಿತು ಯವುದೇ ನೀತಿಯಿಲ್ಲ,’’ಎಂದು ಖ್ಯಾತ ಪರಿಸರವಾದಿ ಎಲ್ಲಪ್ಪ ರೆಡ್ಡಿ ಹೇಳುತ್ತಾರೆ.
ಸರಕಾರ ತೆರವುಗೊಳಿಸಿದ 40,000 ಎಕರೆ ಪ್ರದೇಶವನ್ನುಪಾರ್ಕ್, ಆಟದ ಮೈದಾನ ಹಾಗೂ ನೀರಿನ ಮೂಲಗಳನ್ನು ಸೃಷ್ಟಿಸಲು ಬಳಸಬೇಕು, ಎಂದು ಅವರು ಸಲಹೆ ನೀಡುತ್ತಾರೆ.
ಬೆಂಗಳೂರಿನ ಸಮಸ್ಯೆಗಳನ್ನು ನಿವಾರಿಸಲು ಹೊಸ ಕೈಗಾರಿಕೆಗಳಿಗೆ ಅನುಮತಿ ಕೊಡುವುದನ್ನು ನಿಲ್ಲಿಸಬೇಕು ಎಂದು ಪ್ರೊ. ರಾಮಚಂದ್ರ ರಾವ್ ಹೇಳುತ್ತಾರೆ. ‘‘ಜನರು ಬೆಂಗಳೂರಿಗೆ ವಲಸೆ ಬರದಂತೆ ತಡೆಯಲು ಸರಕಾರ ಹಳ್ಳಿಗಳಲ್ಲಿ ಸಾಕಷ್ಟು ಸೌಲಭ್ಯಗಳನ್ನು ಒದಗಿಸಬೇಕು,’’ಎಂದು ಆರ್ಕಿಟೆಕ್ಟ್ ನಜೀಬ್ ಖಾನ್ ಹೇಳುತ್ತಾರೆ.