ಅತೃಪ್ತ ಶಾಸಕರ ಮನವೊಲಿಕೆ ಪ್ರಯತ್ನ ಇನ್ನೂ ಬಿಟ್ಟಿಲ್ಲ: ಡಿಕೆಶಿ
ಬೆಂಗಳೂರು, ಜು.21: ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ವಿಚಾರ ನನಗೆ ಗೊತ್ತಿಲ್ಲ. ನಾವು ಅತೃಪ್ತ ಶಾಸಕರನ್ನು ಕರೆ ತರುವ ಜಂಜಾಟದಲ್ಲಿದೇವೆ. ಶಾಸಕರು ಎಲ್ಲಿದಾರೆ ಅಂತ ಪತ್ತೆ ಹಚ್ಚಿ ಮಾತುಕತೆ ಮಾಡುವ ಪ್ರಯತ್ನ ಮಾಡ್ತಿದ್ದೇವೆ. ಶಾಸಕರ ಮನವೊಲಿಕೆ ಪ್ರಯತ್ನ ಇನ್ನೂ ಬಿಟ್ಟಿಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶಾಸಕ ಎನ್.ಮಹೇಶ್ ನಾಳೆ ಸದನಕ್ಕೆ ಬರಲ್ಲ ಅಂತ ಹೇಳಿದ ವಿಚಾರಕ್ಕೆ ಸಂಬಂಧಿಸಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಎನ್.ಮಹೇಶ್ ನಾಳೆ ಬರ್ತಾರೆ ಅನ್ನೋ ವಿಶ್ವಾಸ ಇದೆ. ಆದರೆ ನಾಳೆ ಏನಾಗುತ್ತೆ ಅಂತ ಹೇಳೋಕ್ಕೆ ನನಗೆ ಭವಿಷ್ಯ ವಾಣಿ ಗೊತ್ತಿಲ್ಲ ಎಂದರು.
ಸರಕಾರ ಉಳಿಸಲು ನಾವು ತ್ಯಾಗಕ್ಕೆ ಸಿದ್ಧವಾಗಬೇಕು ಎಂದಿರುವ ಜೆಡಿಎಸ್ ನವರು, ಕಾಂಗ್ರೆಸ್ ನಿಂದಲೇ ಯಾರಾದರೂ ಮುಖ್ಯಮಂತ್ರಿ ಆಗಿ ಎಂದಿದ್ದಾರೆ. ಈ ಬಗ್ಗೆ ಅವರು ಕಾಂಗ್ರೆಸ್ ಹೈಕಮಾಂಡ್ ಜೊತೆಗೂ ಮಾತನಾಡಿದ್ದಾರೆ ಎಂದು ಡಿಕೆಶಿ ತಿಳಿಸಿದರು.
Next Story