ಐಎಂಎ ವಂಚನೆ ಪ್ರಕರಣ: ಕೊನೆಗೂ ಮನ್ಸೂರ್ ಸಿಟ್ ವಶಕ್ಕೆ
ಬೆಂಗಳೂರು, ಆ.3: ಐಎಂಎ ವಂಚನೆ ಪ್ರಕರಣದ ಪ್ರಮುಖ ರೂವಾರಿ ಮನ್ಸೂರ್ ಖಾನ್ನನ್ನು ಆ.16ರವರೆಗೂ ಸಿಟ್ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ.
ಶನಿವಾರ ನಗರದ ಒಂದನೇ ಸಿಟಿ ಸಿವಿಲ್ ಕೋರ್ಟ್ ಆ.16ರವರೆಗೂ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದು, ಇಂದಿನಿಂದ 14 ದಿನ ಮನ್ಸೂರ್ ಖಾನ್ನನ್ನು ಸಿಟ್ ವಶಕ್ಕೆ ಪಡೆದು, ಹೆಚ್ಚಿನ ವಿಚಾರಣೆ ನಡೆಸಲಿದೆ.
ಆರೋಪಿ ಮನ್ಸೂರ್ ಖಾನ್ನನ್ನು ಕಸ್ಟಡಿಗೆ ನೀಡುವಂತೆ ನ್ಯಾಯಾಧೀಶ ಶಿವಶಂಕರ್ ಬಿ. ಅಮರಣ್ಣನವರ್ ಮುಂದೆ ಸಿಟ್ ಮನವಿ ಮಾಡಿದ ಹಿನ್ನೆಲೆ, ನ್ಯಾಯಾಧೀಶರು ಆರೋಪಿಯನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ.
Next Story