ಇಂಟರ್ನ್ಯಾಶನಲ್ ಪೀಸ್ ಯುನಿವರ್ಸಿಟಿಯಿಂದ ನಾಲ್ವರಿಗೆ ಗೌರವ ಡಾಕ್ಟರೇಟ್ ಪ್ರದಾನ
ಬೆಂಗಳೂರು, ಆ.17: ವೈದ್ಯಕೀಯ ಸಾಹಿತ್ಯ ಮಂಡನೆ ಹಾಗೂ ಸಮಾಜ ಸೇವೆ ಗುರುತಿಸಿ ಎನ್.ಆನಂದ್ ಸೇರಿ ನಗರದ ನಾಲ್ವರಿಗೆ ಇಂಟರ್ನ್ಯಾಶನಲ್ ಪೀಸ್ ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.
ಜರ್ಮನಿಯ ಗ್ಲೋಬಲ್ ಎಕ್ರಿಡಿಯೇಶನ್ ಕೌನ್ಸಿಲ್ ಅಧಿಕಾರ ಹೊಂದಿರುವ ಇಂಟರ್ನ್ಯಾಶನಲ್ ಪೀಸ್ ಯುನಿವರ್ಸಿಟಿಯು ನಗರದಲ್ಲಿ ನಡೆದ ಘಟಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವೈದ್ಯಕೀಯ ಸಾಹಿತ್ಯ ವಿಷಯ ಮಂಡನೆಗೆ ಎನ್.ಆನಂದ್, ಸಮಾಜ ಸೇವೆ ಗುರುತಿಸಿ ಎಂ.ವಿ.ಶ್ರೀನಿವಾಸ್, ದಿನೇಶ್ ಹೆಗಡೆ ಹಾಗೂ ಉದ್ಯಮಶೀಲತೆ ಸೇವೆ ವಿಭಾಗದಲ್ಲಿ ಎ.ಭರತ್ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು ಎಂದು ಪ್ರಕಟನೆ ತಿಳಿಸಿದೆ.
Next Story