ಅನರ್ಹರು ಶಾಸಕರಾಗಲು ಯೋಗ್ಯರಲ್ಲ: ದಿನೇಶ್ ಗುಂಡೂರಾವ್
ಬೆಂಗಳೂರು, ಡಿ.4: ಜನಾದೇಶಕ್ಕೆ ದ್ರೋಹ ಬಗೆದು, ತಮ್ಮನ್ನು ಮಾರಿಕೊಂಡವರನ್ನು ಸ್ಪೀಕರ್ ಅನರ್ಹಗೊಳಿಸಿದ್ದಾರೆ. ಸುಪ್ರೀಂಕೋರ್ಟ್ ಅವರನ್ನು ಅನರ್ಹ ಎಂದಿದೆ. ಅನರ್ಹರು ಶಾಸಕರಾಗಲು ಯೋಗ್ಯರಲ್ಲ ಎಂದರ್ಥ. ಇಂಥವರು ಚುನಾವಣಾ ಕಣದಲ್ಲಿದ್ದಾರೆ. ಅನರ್ಹರು ತಮ್ಮನ್ನು ಪ್ರತಿನಿಧಿಸಲು ಯೋಗ್ಯರಲ್ಲ ಎಂದು ಮತದಾರರು ತೀರ್ಪು ನೀಡಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.
Next Story