’ಪೊಲೀಸ್ ಕರ್ಫ್ಯೂ’ ಮಾಡಲು ಹೊರಟಿದ್ದಾರೆ: ಭಾಸ್ಕರ್ ರಾವ್ ವಿರುದ್ಧ ಸಿದ್ದರಾಮಯ್ಯ ಆಕ್ರೋಶ
'ಜನತಾ ಕರ್ಫ್ಯೂ’ ಬಗ್ಗೆ ಹೇಳಿಕೆಗೆ ಖಂಡನೆ
ಬೆಂಗಳೂರು, ಮಾ. 21: ಕೊರೋನ ರೋಗವನ್ನು ಎಲ್ಲರೂ ಒಗ್ಗಟ್ಟಾಗಿ ಎದುರಿಸೋಣ, ಪ್ರಧಾನಿ ನರೇಂದ್ರ ಮೋದಿಯವರ ’ಜನತಾ ಕರ್ಫ್ಯೂ’ ಕರೆಯನ್ನು ಪಾಲಿಸೋಣ. ಆದರೆ ಬೆಂಗಳೂರು ಪೊಲೀಸ್ ಆಯುಕ್ತರು ’ಪೋಲಿಸ್ ಕರ್ಫ್ಯೂ’ ಮಾಡಲು ಹೊರಟಿರುವುದು ಅಧಿಕಪ್ರಸಂಗತನದ ನಡವಳಿಕೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ’ಜನತಾ ಕರ್ಫ್ಯೂ’ ಕರೆಯನ್ನು ಪಾಲಿಸೋಣ. ಆದರೆ ಬೆಂಗಳೂರು ಪೊಲೀಸ್ ಆಯುಕ್ತರು ಆಡಳಿತ ಪಕ್ಷಕ್ಕೆ ನಿಷ್ಠೆ ತೋರಲು ಹೋಗಿ 'ಪೋಲಿಸ್ ಕರ್ಫ್ಯೂ’ ಮಾಡಲು ಹೊರಟಿರುವುದು ಅಧಿಕ ಪ್ರಸಂಗತನದ ನಡವಳಿಕೆ. ಪೊಲೀಸರ (CPBlr ) ಮಧ್ಯಪ್ರವೇಶ ಸ್ವಯಂಪ್ರೇರಿತರಾಗಿ ಕರ್ಫ್ಯೂನಲ್ಲಿ ಭಾಗವಹಿಸಲು ಹೊರಟಿರುವ ಜನರನ್ನು ಆತಂಕಕ್ಕೀಡುಮಾಡಿದೆ ಎಂದು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿಯವರ 'ಜನತಾ ಕರ್ಫ್ಯೂ' ಕರೆಯನ್ನು
— Siddaramaiah (@siddaramaiah) March 21, 2020
ಬೆಂಗಳೂರು ಪೊಲೀಸ್ ಆಯುಕ್ತರು 'ಪೋಲಿಸ್ ಕರ್ಫ್ಯೂ' ಮಾಡಲು ಹೊರಟಿರುವುದು ಅಧಿಕಪ್ರಸಂಗತನದ ನಡವಳಿಕೆ. ಪೊಲೀಸರ (@CPBlr) ಮಧ್ಯಪ್ರವೇಶ ಸ್ವಯಂಪ್ರೇರಿತರಾಗಿ ಕರ್ಫ್ಯೂನಲ್ಲಿ ಭಾಗವಹಿಸಲು ಹೊರಟಿರುವ ಜನರನ್ನು ಆತಂಕಕ್ಕೀಡುಮಾಡಿದೆ.#Covid_19 pic.twitter.com/mtYCab6By5