ಲೇಖಕ ಹೆಚ್.ಎಸ್.ವೇಣುಗೊಪಾಲ್ ನಿಧನ
ಬೆಂಗಳೂರು, ಮೇ 19: ಆಕಾಶವಾಣಿ ನಿವೃತ್ತ ಕಾರ್ಯಕ್ರಮ ನಿರ್ವಾಹಕ ಹಾಗು ಲೇಖಕ ಹೆಚ್.ಎಸ್.ವೇಣುಗೊಪಾಲ್(78) ಸೋಮವಾರ ರಾತ್ರಿ ಬೆಂಗಳೂರಿನ ವಿದ್ಯಾರಣ್ಯಪುರದ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.
ಲೇಖಕರಾಗಿ ಅನೇಕ ಕೃತಿಗಳನ್ನೂ ರಚಿಸಿದ್ದರು, ಕನ್ನಡ ಸಾಹಿತ್ಯಲೋಕದ ಆಸಕ್ತಿ ಹೊಂದಿ ಎಂ.ಎಸ್ಸಿ. ನಂತರ ನೌಕರಿಯಲ್ಲಿದ್ದುಕೊಂಡೇ ಎಂ.ಎ., ಎಂಈಡಿ, ಎಂ.ಫಿಲ್ ಮಾಡಿದ್ದರು. ಅವರು ಬರೆದ ಲೇಖನಗಳು ಕನ್ನಡದ ಬಹುಪಾಲು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಮೃತರು ಪತ್ನಿ ಶಾಂತಾ, ಪುತ್ರರಾದ ಸಿಕೆಪಿ ಕಲಾವಿದ ಮಂಜುಕೃಷ್ಣ, ವಿಜಯ್ ಹಾಗು ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಆಕಾಶವಾಣಿ ನಿವೃತ್ತ ನೌಕರರ ಸಂಘದ ಪದಾದಿಕಾರಿಗಳು ಇವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅಂತ್ಯಕ್ರಿಯೆ ಮಂಗಳವಾರ ಲಕ್ಷ್ಮೀಪುರ ಚಿತಾಗಾರದಲ್ಲಿ ಜರುಗಿತು.
Next Story