ಬೆಂಗಳೂರು: ಇಂದು ಬಿಜೆಪಿ ಕಚೇರಿಗೆ ಸಂಸದರು, ಶಾಸಕರು, ಕಾರ್ಯಕರ್ತರಿಗೆ ಪ್ರವೇಶ ನಿಷೇಧ
ಕೊರೋನ ವೈರಸ್ ಭೀತಿ
ಬೆಂಗಳೂರು, ಜೂ.6: ರಾಜ್ಯದಾದ್ಯಂತ ಕೊರೋನ ವೈರಸ್ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು(ಜೂ.6) ಬಿಜೆಪಿ ಪಕ್ಷದ ಕಾರ್ಯಾಲಯಕ್ಕೆ ಸಂಸದರು, ಶಾಸಕರು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಮತ್ತು ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.
ಸಂಜೆ (ಜೂ.6ರಂದು) ನಡೆಯುತ್ತಿರುವ ಬಿಜೆಪಿ ಕೋರ್ ಕಮಿಟಿ ಸಭೆ ಹಿನ್ನೆಲೆಯಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಇರುವುದರಿಂದ ಪಕ್ಷವು ಈ ನಿರ್ಣಯ ತೆಗೆದುಕೊಂಡಿದೆ. ಎಲ್ಲರೂ ಸಹಕರಿಸಿಬೇಕೆಂದು ರಾಜ್ಯ ಬಿಜೆಪಿ ಮಾಧ್ಯಮ ಸಂಚಾಲಕ ಎ.ಎಚ್. ಆನಂದ್ ಮನವಿ ಮಾಡಿದ್ದಾರೆ.
Next Story