ರಾಮ್ನಾಥ್ ಕೋವಿಂದ್ಗೆ ಸಿಎಂ ಅಭಿನಂದನೆ
ಬೆಂಗಳೂರು,ಜು.20: ಭಾರತದ 14ನೆ ರಾಷ್ಟ್ರಪತಿಯಾಗಿ ಆಯ್ಕೆಯಾದ ರಾಮ್ನಾಥ್ ಕೋವಿಂದ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
ಸಮ ಸಮಾಜದ ನಿರ್ಮಾಣಕ್ಕೆ ಅಪಾರ ಹಾಗೂ ಅಗಾಧ ಕೊಡುಗೆ ನೀಡಿ, ಭವ್ಯ ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವಯುತ ಪಾತ್ರ ನಿರ್ವಹಿಸಿ ರಾಷ್ಟ್ರಪತಿಯಾಗಿ ತಮ್ಮ ಹೆಸರು ಅಜರಾಮರವಾಗಲಿ ಎಂದು ಸಿದ್ದರಾಮಯ್ಯ ಅವರು ತಮ್ಮ ಸಂದೇಶದಲ್ಲಿ ಶುಭ ಹಾರೈಸಿದ್ದಾರೆ
Next Story