ಕ್ಯಾಬ್ ಚಾಲಕ ಇರ್ಫಾನ್ ಕೊಲೆ ಪ್ರಕರಣ: ಒಂದೇ ದಿನದಲ್ಲಿ ಆರೋಪಿ ಬಂಧನ
ಬೆಂಗಳೂರು, ಜು.21: ಕ್ಯಾಬ್ ಚಾಲಕ ಇರ್ಫಾನ್ ಕೊಲೆ ಪ್ರಕರಣ ಸಂಬಂಧ ಇಲ್ಲಿನ ಜಯನಗರ ಠಾಣಾ ಪೊಲೀಸರು, ಒಂದು ದಿನದಲ್ಲೇ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಯನಗರದ 5ನೆ ಬ್ಲಾಕ್ನ ಪುರಷೋತ್ತಮ(25) ಬಂಧಿತ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜು.19ರ ಸಂಜೆ ಕನಕಪುರ ಮುಖ್ಯರಸ್ತೆಯ 36ನೆ ಬಿ ಕ್ರಾಸ್ನಲ್ಲಿ ಕ್ಯಾಬ್ ಚಾಲಕ ಇರ್ಫಾನ್ ಶರೀಫ್(23) ಎಂಬುವರನ್ನು ಮಾತನಾಡಿಸುವ ನೆಪದಲ್ಲಿ ದೂರವಾಣಿ ಕರೆ ಮಾಡಿ ಕರೆಸಿಕೊಂಡು ನಂತರ ಆತನೊಂದಿಗೆ ಜಗಳವಾಡಿ ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದ ಎಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ ಜಯನಗರ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ಜಯನಗರ ಮತ್ತು ಕೆಎಸ್ ಲೇಔಟ್ ಇನ್ಸ್ಪೆಕ್ಟರ್ಗಳ ಎರಡು ವಿಶೇಷ ತಂಡಗಳನ್ನು ನೇಮಕ ಮಾಡಲಾಗಿತ್ತು ಎಂದು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.
Next Story