ಅರ್ನಾಬ್ ಗೋಸ್ವಾಮಿ, ಟೈಮ್ಸ್ ನೌ ವಾಹಿನಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು
ಡಿ.ಕೆ.ರವಿ ಸಾವಿನ ಸುದ್ದಿಯಲ್ಲಿ ಆಧಾರ ರಹಿತ ಆರೋಪ
ಬೆಂಗಳೂರು, ಜು.26: ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿಗೆ ಸಂಬಂಧಿಸಿದ ಸುದ್ದಿಯಲ್ಲಿ ತಮ್ಮ ವಿರುದ್ಧ ಆಧಾರ ರಹಿತ ಆರೋಪ ಮಾಡಿದ್ದಾರೆ ಎಂದು ಪತ್ರಕರ್ತ ಅರ್ನಾಬ್ ಗೋಸ್ವಾಮಿ ಹಾಗೂ ಟೈಮ್ಸ್ ನೌ ವಾಹಿನಿ ವಿರುದ್ಧ ಸಚಿವ ಕೆ.ಜೆ.ಜಾರ್ಜ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. 2015ರ ಮಾರ್ಚ್ 23ರಂದು ಪ್ರಸಾರವಾದ ನ್ಯೂಸ್ನಲ್ಲಿ ಯಾವುದೇ ಸಾಕ್ಷವಿಲ್ಲದಿದ್ದರೂ ಗೃಹ ಸಚಿವರಾಗಿದ್ದ ಜಾರ್ಜ್ರನ್ನು ಗುರಿಯಾಗಿಸಿ ವರದಿ ಮಾಡಿದ ಆರೋಪದ ಮೇಲೆ ದೂರು ನೀಡಲಾಗಿದೆ
ಫೇಕ್ ನ್ಯೂಸ್ ಪ್ರಸಾರ ಮಾಡಿ, ಈ ನ್ಯೂಸ್ ಬುಲೆಟಿನ್ ಅನ್ನು ಫೇಸ್ ಬುಕ್, ಟ್ವಿಟರ್, ಯೂಟ್ಯೂಬ್ನಲ್ಲೂ ವೈರಲ್ ಮಾಡಲಾಗಿತ್ತು. ಆದರೆ ಇತ್ತೀಚೆಗೆ ಡಿಕೆ ರವಿ ಸಾವು ಆತ್ಮಹತ್ಯೆ ಎಂದು ಸಿಬಿಐನಿಂದ ವರದಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಜಾರ್ಜ್ ಅವರು ಮಾನನಷ್ಟ ಮೊಕದ್ದಮೆ ದೂರು ದಾಖಲಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ 10ನೆ ಎಸಿಎಂಎಂ ನ್ಯಾಯಾಲಯ ವಿಚಾರಣೆಯನ್ನು ಆಗಸ್ಟ್ 19ಕ್ಕೆ ಮುಂದೂಡಿದೆ.
Next Story