ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆ: ವಿಕಾಸ್ ಪ.ಪೂ. ಕಾಲೇಜಿನ ವಿದ್ಯಾರ್ಥಿ ಪ್ರಥಮ
ಡಾ. ರಾಜ್ಕುಮಾರ್ ಸ್ಮರಣಾರ್ಥ
ಬೆಂಗಳೂರು, ಆ.8: ಶಿವಜ್ಯೋತಿ ಯೋಗ ಕೇಂದ್ರ ಬೆಂಗಳೂರು ಮತ್ತು ಸಾಯಿ ಇನ್ಸ್ಟಿಟ್ಯೂಟ್ ಆಫ್ ಯೋಗ ಇವರ ಸಹಯೋಗದಲ್ಲಿ ಬೆಂಗಳೂರಿನ ಕಾಶ್ಮೀರ ಭವನದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿಕಾಸ್ ಪ.ಪೂ. ಕಾಲೇಜಿನ ವಿದ್ಯಾರ್ಥಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಡಾ. ರಾಜ್ಕುಮಾರ್ ಸ್ಮರಣಾರ್ಥ ರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಮಂಗಳೂರು ವಿಕಾಸ್ ಪ.ಪೂ. ಕಾಲೇಜಿನ ದ್ವಿತೀಯ ಪಿ.ಯು. ವಿದ್ಯಾರ್ಥಿ ಶಿವನಗೌಡ ಹರನಾಳ್ 15 ರಿಂದ 20 ವಯೋಮಿತಿಯೊಳಗಿನ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಮೂರು ಕಡ್ಡಾಯ ಆಸನದೊಂದಿಗೆ ಎರಡು ಐಚ್ಛಿಕ ಆಸನಗಳಾದ ವೃಶ್ಚಿಕಾಸನವನ್ನು ಪ್ರದರ್ಶಿಸಿರುತ್ತಾರೆ.
Next Story