ಕುಟುಂಬದ ಒಬ್ಬರಿಗೆ ಕೆಲಸ, 5 ಲಕ್ಷ ರೂ.ಪರಿಹಾರ: ಮೇಯರ್ ಪದ್ಮಾವತಿ
ಮರ ಬಿದ್ದು ಮೂವರ ದುರ್ಮರಣ
ಬೆಂಗಳೂರು, ಸೆ.9: ನಗರದಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಕಾರಿನ ಮೇಲೆ ಮರಬಿದ್ದು ಮೃತ ಪಟ್ಟಿರುವ ಕುಟುಂಬದ ಒಬ್ಬರಿಗೆ ಬಿಬಿಎಂಪಿಯಲ್ಲಿ ಕೆಲಸ ಹಾಗೂ 5ಲಕ್ಷ ರೂ.ಪರಿಹಾರ ನೀಡಲಾಗುವುದು ಎಂದು ಮೇಯರ್ ಪದ್ಮಾವತಿ ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಕಾರಿನ ಮೇಲೆ ಮರಬಿದ್ದು ಒಂದೇ ಕುಟುಂಬದ ಮೂರು ಮಂದಿ ಸಾವನ್ನಪ್ಪಿದ್ದರು. ಮೃತ ದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ನೀಡಿದರು. ಈ ವೇಳೆ ಆಗಮಿಸಿದ ಅವರು, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ಕಳೆದ ಎರಡು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರು ಅಸ್ತವ್ಯಸ್ತವಾಗಿದೆ. ಮಳೆಯ ಪರಿಣಾಮ ಕಾರಿನ ಮೇಲೆ ಮರಬಿದ್ದು ಮೂವರು ಸಾವನ್ನಪ್ಪಿರುವುದು ದುರದೃಷ್ಟಕರ. ಅವರ ಕುಟುಂಬಕ್ಕೆ ಸರಿಯಾದ ಪರಿಹಾರ ಒದಗಿಸುವುದು ಬಿಬಿಎಂಪಿ ಜವಾಬ್ದಾರಿಯಾಗಿದ್ದು, 5ಲಕ್ಷ ರೂ.ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಬಿಬಿಎಂಪಿಯಲ್ಲಿ ಕೆಲಸ ಕೊಡಿಸುವುದಾಗಿ ಅವರು ಭರವಸೆ ನೀಡಿದರು.
Next Story