ಕೆಸಿಎಫ್ ನೊಂದಿಗೆ ಕೈಜೋಡಿಸಿ: ಬೇಕಲ್ ಉಸ್ತಾದ್
ಒಮಾನ್, ಡಿ. 8: ಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮಾನ್ ವತಿಯಿಂದ ರುವಿಯ ಅಲ್ ಮಾಸಾ ಹಾಲ್ ನಲ್ಲಿ ಇತ್ತೀಚಿಗೆ ನಡೆದ ಮೆಹ್ಫಿಲೇ ಮುಸ್ತಫಾ (ಸ.ಅ) ಬೃಹತ್ ಮೀಲಾದ್ ಸಮಾವೇಶದಲ್ಲಿ ಖಾಝಿ ಪಿ.ಎಂ. ಬೇಕಲ್ ಉಸ್ತಾದ್ ಮಾತನಾಡುತ್ತಾ ಕೆ.ಸಿ.ಎಫ್ ನ ಸದಸ್ಯತ್ವ ಸ್ವೀಕರಿಸಿ ಬಡವರ ಏಳಿಗೆಗೆ ಶ್ರಮಿಸುತ್ತಿರುವ, ಹಜ್ಜ್ ಉಮ್ರಾ ಯಾತ್ರಿಗಳ ಸೇವೆ ಮಾಡುವುದು ಹಾಗೂ ಪ್ರವಾಸಿಗಳ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಕೆ.ಸಿ.ಎಫ್ ನೊಂದಿಗೆ ಕೈಜೋಡಿಸಿ ಎಂದು ಕರೆಯಿತ್ತರು.
ನೌಫಲ್ ಸಖಾಫಿ ಕಳಸ ಮಾತನಾಡಿ ಮೆಹ್ಫಿಲೇ ಮುಸ್ತಫಾ (ಸ.ಅ) ರವರ ಜೀವನ ಚರಿತ್ರೆಯನ್ನು ವಿವರಿಸಿದರು.
ಕಾರ್ಯಕ್ರಮದ ಉದ್ಘಾಟನೆ ಯನ್ನು ಆರ್.ಎಸ್.ಸಿ. ಅಧ್ಯಕ್ಷ ನಿಶಾದ್ ಅಹ್ಸನಿ ನೆರೆವೇರಿಸಿದರು. ನಅತೇ ಶರೀಫ್ ಅನ್ನು ಹನೀಫ್ ರಝಾ ಖಾದ್ರಿ ನಡೆಸಿದರು. ಕೆ.ಸಿ.ಎಫ್. ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಸೈಯದ್ ಆಬಿದ್ ಹೈದ್ರೋಸಿ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿಯ ಗೌರವಾಧ್ಯಕ್ಷ ಉಮರ್ ಸಖಾಫಿ ಮಿತ್ತೂರು, ಇಹ್ಸಾನ್ ಉಪಾಧ್ಯಕ್ಷ ಇಕ್ಬಾಲ್ ಬರ್ಕ, ಡಿಕೆಎಸ್ ಸಿ ಅಧ್ಯಕ್ಷ ಮೋನಬ್ಬ ಅಬ್ದುಲ್ ರಹಿಮಾನ್, ಮೀಲಾದ್ ಸಮಿತಿಯ ಚೇಯರ್ಮಾನ್ ಇಬ್ರಾಹಿಂ ಅತ್ರಾಡಿ, ಅಯ್ಯೂಬ್ ಕೋಡಿ, ಕನ್ವೀನರ್ ಆರಿಫ್ ಕೋಡಿ, ಸಂಘಟನಾ ಅಧ್ಯಕ್ಷ ಹಂಝ ಕನ್ನಂಗಾರ್, ಉಬೈದ್ ಸಖಾಫಿ ಮಿತ್ತೂರು, ಝುಬೈರ್ ಸಅದಿ ಪಾಟ್ರಕೋಡಿ, ಇಕ್ಬಾಲ್ ಮದನಿ ಚೆನ್ನಾರ್, ಖಾಸಿಂ ಹಾಜಿ ನಿಝ್ವ, ನಿಝಾರ್ ಅಹ್ಮದ್ ಝುಹ್ರಿ ಇವರು ಉಪಸ್ಥಿತರಿದ್ದರು.
ಇಕ್ಬಾಲ್ ಮದನಿ ಚೆನ್ನಾರ್ ಇವರ ನೇತೃತ್ವದಲ್ಲಿ ಮೌಲಿದ್ ಪಾರಾಯಣ ದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಸಾದಿಖ್ ಕಾಟಿಪಳ್ಳ ಇವರು ಖಿರಾಅತ್ ಪಟಿಸಿದರು. ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಹನೀಫ್ ಸಅದಿ ಸ್ವಾಗತಿಸಿ, ಕಲಂದರ್ ಬಾವ ಕಾರ್ಯಕ್ರಮವನ್ನು ನಿರೂಪಿಸಿದರು.