ಯಮನ್ ಸಂತ್ರಸ್ತರಿಗೆ ಕೆಎಸ್ರಿಲೀಫ್ ನೆರವು
ಜಿದ್ದಾ (ಸೌದಿ ಅರೇಬಿಯ), ಮಾ. 10: ಯಮನ್ನಲ್ಲಿ ಹೌದಿ ಬಂಡುಕೋರರಿಂದ ಮುತ್ತಿಗೆಗೊಳಗಾಗಿರುವ ನಾಗರಿಕರಿಗೆ ‘ದೊರೆ ಸಲ್ಮಾನ್ ಮಾನವೀಯ ನೆರವು ಮತ್ತು ಪರಿಹಾರ ಕೇಂದ್ರ’ (ಕೆಎಸ್ರಿಲೀಫ್) ಗುರುವಾರ ನೆರವು ವಿತರಿಸಿದೆ.
ಯಮನ್ ಸಮಗ್ರ ಮಾನವೀಯ ಕಾರ್ಯಾಚರಣೆಯ ಭಾಗವಾಗಿರುವ ಈ ನೆರವಿನಲ್ಲಿ ಆಶ್ರಯ ಮತ್ತು ಖರ್ಜೂರದ 300 ಪೊಟ್ಟಣಗಳನ್ನು ಒದಗಿಸಲಾಗುತ್ತದೆ. ಮರಿಬ್ ರಾಜ್ಯದ 1,000 ಜನರಿಗೆ ಈ ನೆರವನ್ನು ನೀಡಲಾಗಿದೆ.
ಹದ್ರಾಮಾತ್ನ ಮುಕಲ್ಲ ವಲಯದಲ್ಲಿರುವ ವೈದ್ಯಕೀಯ ಸಿಬ್ಬಂದಿ ಮತ್ತು ಅರ್ಹ ಕುಟುಂಬಗಳಿಗೆ ಆಹಾರ ಚೀಲಗಳನ್ನು ನೀಡುವ ಮೂಲಕ ಕೆಎಸ್ರಿಲೀಫ್ ಡೆಂಗ್ ವಿರುದ್ಧದ ಹೋರಾಟದಲ್ಲಿ ತೊಡಗಿದೆ. ಇಲ್ಲಿ ಡೆಂಗಿ ಪೀಡಿತ 600 ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ಆಹಾರ ಪಡಿತರವನ್ನು ಒದಗಿಸಲಾಗಿದೆ.
Next Story