ಮದೀನಾ ತಲುಪಿದ ಮಂಗಳೂರಿನ ಹಜ್ ಯಾತ್ರಾರ್ಥಿಗಳಿಗೆ ಕೆಸಿಎಫ್ನಿಂದ ಸ್ವಾಗತ
ಸೌದಿ ಅರೇಬಿಯಾ, ಜು.22: ಪವಿತ್ರ ಹಜ್ ಕರ್ಮ ನಿರ್ವಹಿಸಲು ಕರ್ನಾಟಕದ ಮಂಗಳೂರಿನಿಂದ ಆಗಮಿಸಿದ 146 ಯಾತ್ರಾರ್ಥಿಗಳ ಪ್ರಥಮ ತಂಡ ಶನಿವಾರ ಮದೀನಾ ಮುನವ್ವರದ ಪ್ರಿನ್ಸ್ ಮುಹಮ್ಮದ್ ಬಿನ್ ಅಬ್ದುಲ್ ಅಝೀಝ್ ವಿಮಾನ ನಿಲ್ದಾಣ ತಲುಪಿತು. ಯಾತ್ರಾರ್ಥಿಗಳನ್ನು ಕೆಸಿಎಫ್ ಎಚ್ವಿಸಿ ತಂಡ ಆದರದಿಂದ ಸ್ವಾಗತಿಸಿತು. ಹಜ್ಜಾಜಿಗಳು ತಂಗುವ ವಸತಿಗಳಿಗೆ ತೆರಳಿದ ಎಚ್.ವಿ.ಸಿ. ಕಾರ್ಯಕರ್ತರು ಯಾತ್ರಾರ್ಥಿಗಳಿಗೆ ಹಣ್ಣು ಹಂಪಲು ನೀಡಿ, ಲಗೇಜ್ ಸಾಗಿಸಲು ಸಹಕರಿಸಿದರು. 146 ಹಜ್ಜಾಜಿಗಳು ಶನಿವಾರ ದಂದು ಮದೀನಾಕ್ಕೆ ಆಗಮಿಸಿದ್ದು, ಕರ್ನಾಟಕದಿಂದ
ಮಂಗಳೂರಿನಿಂದ ರವಿವಾರ ಮತ್ತು ಸೋಮವಾರವೂ ಯಾತ್ರಾರ್ಥಿಗಳು ಮದೀನಾಕ್ಕೆ ಆಗಮಿಸಲಿದ್ದಾರೆ. ಯಾತ್ರಾರ್ಥಿಗಳಿಗೆ ಅಗತ್ಯವಿರುವ ಸೇವೆ ನೀಡಲು ಕೆಸಿಎಫ್ ಎಚ್.ವಿ.ಸಿ. ಕಾರ್ಯಕರ್ತರು ಸನ್ನದ್ಧರಾಗಿದ್ದಾರೆ ಎಂದು ಎಚ್.ವಿ.ಸಿ. ರಾಷ್ಟ್ರೀಯ ಸಮಿತಿ ಕನ್ವೀನರ್ ಸಲೀಂ ಕನ್ಯಾಡಿ ತಿಳಿಸಿದ್ದಾರೆ. ಈ ವೇಳೆ ಕೆಸಿಎಫ್ ಎಚ್.ವಿ.ಸಿ. ಮದೀನಾ ಸಮಿತಿಯ ಅಧ್ಯಕ್ಷ ತಾಜುದ್ದೀನ್ ಸುಳ್ಯ, ಕನ್ವೀನರ್ ರಝಾಕ್ ಸಂತೋಷ್ ನಗರ, ಫಾರೂಕ್ ನಈಮಿ, ಜಬ್ಬಾರ್ಉಪ್ಪಿನಂಗಡಿ, ರಝಾಕ್ ಬೈತಡ್ಕ, ಅಶ್ರಫ್ ಸಖಾಫಿ ನೂಜಿ, ಇಕ್ಬಾಲ್ ಕುಪ್ಪೆಪದವು, ಮತ್ತಿತರರು ಉಪಸ್ಥಿತರಿದ್ದರು . ವರದಿ : ಹಕೀಂ ಬೋಳಾರ್