ಅಬುಧಾಬಿ: ಬಿಡಬ್ಲ್ಯೂಎಫ್ ಸ್ಥಾಪಕ ಉಪಾಧ್ಯಕ್ಷ ಮುಹಮ್ಮದ್ ರಫೀಕ್ ಕೃಷ್ಣಾಪುರಗೆ ಬಿಳ್ಕೊಡುಗೆ
ಅಬುಧಾಬಿ, ಜ. 21: ಬ್ಯಾರೀಸ್ ವೆಲ್ಫೇರ್ ಫೋರಮ್ ಅಬುಧಾಬಿ ವತಿಯಿಂದ ಪ್ರವಾಸಿ ಜೀವನವನ್ನು ಅಂತ್ಯಗೊಳಿಸಿ ತಾಯಿನಾಡಿಗೆ ಹಿಂತಿರುಗುವ ಫೋರಮ್ ಸ್ಥಾಪಕ ಉಪಾಧ್ಯಕ್ಷರಾದ ಮುಹಮ್ಮದ್ ರಫೀಕ್ ಕೃಷ್ಣಾಪುರ ಅವರಿಗೆ ಬೀಳ್ಕೊಡುಗೆಯನ್ನು ಏರ್ಪಡಿಸಲಾಯಿತು.
ಮುಹಮ್ಮದ್ ಅಲಿ ಉಚ್ಚಿಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ನಂತರ ಮಾತನಾಡಿದರು.
ಈ ಸಂದರ್ಭ ಅಬ್ದುಲ್ಲಾ ಮದುಮೂಲೆ ಸ್ವಾಗತಿಸಿ, ರಫೀಕ್ ಅವರು ಬಿಡಬ್ಲ್ಯೂಎಫ್ ನಲ್ಲಿ 15 ವರ್ಷ ನಿರಂತರವಾಗಿ ಸಲ್ಲಿಸಿದ ಸೇವೆಯನ್ನು ಸ್ಲಾಘಿಸಿದರು. ಅಬ್ದುಲ್ ಹಮೀದ್ ಉಚ್ಚಿಲ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಸಹ ಪ್ರವರ್ತಕರಾದ ಅಬ್ದುಲ್ ರವೂಫ್, ಅಬ್ದುಲ್ ಮಜೀದ್, ಅಬ್ದುಲ್ ಹಮೀದ್ ಗುರುಪುರ, ಇಮ್ರಾನ್ ಅಹ್ಮದ್, ಮುಹಮ್ಮದ್ ಸಿದ್ದೀಕ್, ಬಶೀರ್ ಬಜ್ಪೆ, ಮುಹಮ್ಮದ್ ಕಲ್ಲಾಪು, ಹನೀಫ್ ಉಳ್ಳಾಲ್, ಜಲೀಲ್ ಗುರುಪುರ, ನವಾಝ್ ಅಹ್ಮದ್, ಅಬ್ದುಲ್ ರಶೀದ್ ಬಿಜೈ, ಮುಜೀಬ್ ಉಚ್ಚಿಲ್, ರಶೀದ್ ವಿ.ಕೆ., ಮೊಹಿದೀನ್ ಹಂಡೇಲ್, ಮಜೀದ್ ಆತೂರ್ ಮತ್ತು ಇರ್ಫಾನ್ ಅಹ್ಮದ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಈ ಸಂದರ್ಭ ಮುಹಮ್ಮದ್ ರಫೀಕ್ ಅವರು ಮಾತನಾಡಿ, ತಮ್ಮ ಅನುಭವಗಳನ್ನು ವಿವರಿಸಿದರು.