ಅಬುಧಾಬಿಯಲ್ಲಿ ದಾರುನ್ನೂರ್ ವತಿಯಿಂದ ಕುಟುಂಬ ಸಮ್ಮಿಲನ
ಅಬುಧಾಬಿ, ಎ.4: ದಾರುನ್ನೂರ್ ಎಜುಕೇಶನ್ ಸೆಂಟರ್ ಕಾಶಿಪಟ್ನ ಮೂಡಬಿದ್ರಿ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ, ದಾರುನ್ನೂರ್ ಕಲ್ಚರಲ್ ಸೆಂಟರ್ ಯುಎಇ ಅಬುಧಾಬಿ ವಲಯದ ವತಿಯಿಂದ ದ.ಕ ಮತ್ತು ಉಡುಪಿ ಉಭಯ ಜಿಲ್ಲೆಗಳ ಅನಿವಾಸಿ ಕುಟುಂಬಸ್ಥರರಿಗಾಗಿ 'ಬಿ ಬಿ ಕ್ಯೂ ನೈಟ್ ವಿದ್ ದಾರುನ್ನೂರ್' ಎಂಬ ವಿಶೇಷ ಕಾರ್ಯಕ್ರಮವನ್ನು ಮಾ.31ರಂದು ಶುಕ್ರವಾರ ಸಂಜೆ 7 ಗಂಟೆಗೆ ಸರಿಯಾಗಿ ಅಬುಧಾಬಿಯ ಖಲೀಜ್ ಅಲ್-ಅರಬ್ ಸ್ಟ್ರೀಟ್ ನಲ್ಲಿರುವ ಪಿಕ್ನಿಕ್ ಸೈಟ್ ಪ್ರದೇಶದಲ್ಲಿ ನಡೆಯಿತು.
ಸಂಜೆ 7 ರಿಂದ ರಾತ್ರಿ 11 ರ ವರೆಗೆ ನೆರವೇರಿದ ಈ ‘ಸಂತೋಷಕೂಟದಲ್ಲಿ' ಪುರುಷರು , ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 250 ಕ್ಕೂ ಅಧಿಕ ಜನರು ಸೇರಿದ್ದರು.
ವಲಯಾಧ್ಯಕ್ಷ ಅಬ್ದುಲ್ ರವೂಫ್ ಹಾಜಿ ಕೈಕಂಬರವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನೆರವೇರಿಸಲಾಯಿತು. ಈ ಸಂದರ್ಭ ದಾರುನ್ನೂರ್ ಸಂಸ್ಥೆಯ ಉದ್ದೇಶ ಹಾಗೂ ಯೋಜನೆಗಳ ವಿವರಗಳನ್ನೊಳಗೊಂಡ ಕೈಪಿಡಿಯನ್ನು ನೆರೆದವರಿಗೆ ವಿತರಿಸಲಾಯಿತು.
ಮಹಿಳೆಯರಿಗೆ ಮತ್ತು ಮಕ್ಕಳಿಗಾಗಿ ಮಿಸೆಸ್ ಅಬ್ದುಲ್ ರವೂಫ್ ಹಾಜಿಯವರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮವನ್ನು ಆಯೋಜಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಅದೇ ರೀತಿ ಪಾಲ್ಗೊಂಡ ಎಲ್ಲಾ ಪುಟಾಣಿಗಳಿಗೆ ಪ್ರೋತ್ಸಾಹಕರ ಬಹುಮಾನ ನೀಡಿ ಸಂತೋಷ ಪಡಿಸಲಾಯಿತು.
ದಾರುನ್ನೂರ್ ಯುಎಇ ಇದರ ಗೌರವಾಧ್ಯಕ್ಷ ಮುಹಮ್ಮದ್ ಮುಸ್ತಾಕ್ ಕದ್ರಿ, ಪ್ರಧಾನ ಕಾರ್ಯದರ್ಶಿ ಬದ್ರುದ್ದೀನ್ ಹೆಂತಾರ್, ಕೋಶಾಧಿಕಾರಿ ಅಬ್ದುಲ್ ಸಲಾಂ ಬಪ್ಪಳಿಗೆ, ಉಪಾಧ್ಯಕ್ಷ ಮಹಮ್ಮದ್ ರಫೀಕ್ ಆತೂರು, ಸಂಘಟನಾ ಕಾರ್ಯದರ್ಶಿ ಹಮೀದ್ ಮನಿಲ, ಇಂಟರ್ ನ್ಯಾಷನಲ್ ಕೋ ಆರ್ಡಿನೇಟರ್ ಸಾಜಿದ್ ಬಜ್ಪೆ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಮುಖ್ಯ ಅತಿಥಿಗಳಾಗಿ ಬ್ಯಾರೀಸ್ ವೆಲ್ಫೇರ್ ಫೋರಂ (BWF) ಅಬುಧಾಬಿ ಇದರ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಹಾಜಿ ಮದುಮೂಲೆ, ಉಪಾಧ್ಯಕ್ಷ ರಫೀಕ್ ಕೃಷ್ಣಾಪುರ ಹಾಗೂ ಇತರ ಪಧಾಧಿಕಾರಿಗಳು ಕುಟುಂಬ ಸಮೇತ ಭಾಗವಹಿಸಿ ಈ ಸಂತೋಷಕೂಟದ ಯಶಸ್ಸಿಗೆ ಮತ್ತಷ್ಟು ಮೆರುಗನ್ನು ನೀಡಿದರು.
ದಾರುನ್ನೂರ್ ಅಬುಧಾಬಿ ವಲಯದ ಪ್ರಧಾನ ಕಾರ್ಯದರ್ಶಿ ಮಜೀದ್ ಅರಿಯಮೂಲೆ, ಗೌರವಾಧ್ಯಕ್ಷರಾದ ಹನೀಫ್ ಅರಿಯಮೂಲೆ, ಕಾರ್ಯದರ್ಶಿ ಜಲೀಲ್ ಗುರುಪುರ ಮೊದಲಾದವರು ಕಾರ್ಯಕ್ರಮವನ್ನು ಆಯೋಜಿಸಿ ಸಹಕರಿಸಿದರು
ಹಮೀದ್ ಗುರುಪುರ, ಅಬ್ದುಲ್ ಖಾದರ್ ಕಾರ್ಕಳ, ಇರ್ಷಾದ್ ಸೂರಲ್ಪಾಡಿ, ಶಾಫಿ ಪೆರುವಾಯಿ, ಹನೀಫ್ ಉಸ್ತಾದ್ ಬಿ.ಸಿ ರೋಡ್ , ಇಸಾಕ್ ಬಜ್ಪೆ, ಖಾಲಿದ್ (ಮರೀನ), ಸರ್ಫ್ರಾಝ್ ಕುದ್ರೋಳಿ, ರಶೀದ್ ನಾಳ, ಶಕೂರ್ ಪುತ್ತೂರು, ಸಿದ್ದೀಕ್ ಉಚ್ಚಿಲ, ರಿಯಾಝ್ ಕುದ್ರೋಳಿ ಮೊದಲಾದವರು ಕಾರ್ಯಕ್ರಮ ಯಶಸ್ವಿ ಗೊಳ್ಳಲು ಸಹಕರಿಸಿದರು.