ದಾರುಲ್ ಇರ್ಷಾದ್ ಮದೀನಾ ಸಮಿತಿ ಮಹಾಸಭೆ
ಮದೀನಾ, ಮೇ 14: ದಾರುಲ್ ಇರ್ಷಾದ್ ಎಜುಕೇಷನಲ್ ಸೆಂಟರ್ ಮಾಣಿ ಇದರ ಮದೀನಾ ಮುನವ್ವರ ಘಟಕದ ಮಹಾಸಭೆಯು ಮದೀನಾದ ಹವಾಲಿ ಗೈಸ್ ಹಾಲ್ ನಲ್ಲಿ ನಡೆಯಿತು.
ಸಮಿತಿಯ ಅಧ್ಯಕ್ಷ ಬಶೀರ್ ಉಪ್ಪಿನಂಗಡಿ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯನ್ನು ದಾರುಲ್ ಇರ್ಶಾದ್ ನ ರಿಸೀವರ್ ಉಮರ್ ಕಾಮಿಲ್ ಸಖಾಫಿ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಹಬೀಬ್ ಅಳಕೆ ವಾರ್ಷಿಕ ವರದಿ ವಾಚಿಸಿದರು.
ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ತಾಜುದ್ದೀನ್ ಸುಳ್ಯ, ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಗಡಿಯಾರ್, ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಕಿನ್ಯಾ ಮತ್ತು ಬದ್ರುದ್ದೀನ್ ಕಬಕ, ಪ್ರಧಾನ ಕಾರ್ಯದರ್ಶಿಯಾಗಿ ಹಬೀಬ್ ಅಳಕೆ, ಕೋಶಾಧಿಕಾರಿಯಾಗಿ ಫಾರೂಕ್ ಅಳಕೆ, ಜೊತೆಕಾರ್ಯದರ್ಶಿಗಳಾಗಿ ಅಬ್ದುಲ್ ಅಝೀಝ್ ಸುರಿಬೈಲ್ ಮತ್ತು ಆರಿಫ್ ಮಡಂತ್ಯಾರ್, ಸಂಘಟನಾ ಕಾರ್ಯದರ್ಶಿಯಾಗಿ ಶರೀಫ್ ಮರವೂರ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮಹಮ್ಮದಲಿ ಪಾಣೆಮಂಗಳೂರು, ಬಶೀರ್ ಉಪ್ಪಿನಂಗಡಿ, ಇಖ್ಬಾಲ್ ಕುಪ್ಪೆಪದವು, ಅಶ್ರಫ್ ಕಿನ್ಯಾ, ನಿಯಾಝ್ ಬಾಂಬಿಲ, ಉಮರ್ ಗೇರುಕಟ್ಟೆ ಇವರನ್ನು ಆಯ್ಕೆಮಾಡಲಾಯಿತು.
ಅಬ್ದುಲ್ ಅಝೀಝ್ ಗಡಿಯಾರ್ ಸ್ವಾಗತಿಸಿ, ಹಬೀಬ್ ಅಳಕೆ ವಂದಿಸಿದರು.ಝಾಕಿರ್ ಕಿರಾಅತ್ ಪಠಿಸಿದರು.