ದುಬೈ : ಕರ್ಣಾಟಕ ಬ್ಯಾರೀಸ್ ಯೂತ್ ಕೌನ್ಸಿಲ್ ವತಿಯಿಂದ ಇಫ್ತಾರ್ ಕೂಟ
ದುಬೈ,ಜೂ.20 : ವಿದ್ಯಾರ್ಥಿಗಳಿಗೆ ನೆರವಾಗುವ ಹಾಗೂ ಇನ್ನಿತರ ಸಹಾಯ ಸೌಲಭ್ಯಗಳನ್ನು ಒದಗಿಸಿ ಕೊಡುವ ಸಲುವಾಗಿ ಕರ್ಣಾಟಕ ಬ್ಯಾರೀಸ್ ಯೂತ್ ಕೌನ್ಸಿಲ್ ಎಂಬ ಸಂಘಟನೆಯು ದುಬೈ ಯ ರೈಂಬೋ ಸ್ಟೀಕ್ ನಲ್ಲಿ ನಡೆದ ಇಫ್ತಾರ್ ಕೂಟದ ಬಳಿಕ ರಝಾಕ್ ದೇವಾ ರವರ ನೇತೃತ್ವದಲ್ಲಿ ಉದ್ಘಾಟನೆಗೊಂಡಿತು.
ಈ ಸಂಧರ್ಭದಲ್ಲಿ ಸಭಿಕರೊಂದಿಗೆ ಮಾತನಾಡಿದ ರಝಾಕ್ ದೇವಾ ರವರು ವಿದ್ಯಾಭ್ಯಾಸದ ಮಹತ್ವ, ಸಂಘಟನೆಯ ಅನಿವಾರ್ಯತೆ ಹಾಗೂ ಯಾವ ರೀತಿ ಸಂಘಟನೆಯು ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಬಹುದು ಎಂಬುದನ್ನು ವಿವರಿಸಿದರು.
ನಂತರ ಮಾತನಾಡಿದ ಕೆ.ಬಿ.ವೈ.ಸಿ ಮುಖ್ಯಸ್ಥರಾದ ಝಹೀರ್ ಮಂಗಳೂರು ರವರು ಈ ಸಂಘಟನೆಯು ವಿದ್ಯಾಭ್ಯಾಸದ ನೆರವಿಗಾಗಿ ಕಾರ್ಯ ಪ್ರವೃತ್ತಿಯಲ್ಲಿ ತೊಡಗಿಕೊಳ್ಳಲು ರೂಪುಗೊಂಡಂತಹ ಮೊದಲ ಸಂಘಟನೆಯಾಗಿದ್ದು ದುಬೈ ಯಲ್ಲಿ ಕಾರ್ಯಾಚರಿಸುವಂತಹ ಇತರ ಸಂಘ ಸಂಸ್ಥೆಗಳ ಬೆಂಬಲವನ್ನು ನಿರೀಕ್ಷಿಸುತ್ತೇವೆ ಎಂದರು.
ನಿಯಾಝ್ ಫರಂಗಿಪೇಟೆರವವರು ಮುಂದಿನ ದಿನಗಳಲ್ಲಿ ಯು.ಎ.ಇ. ಯಲ್ಲಿ ರಕ್ತದಾನ ಶಿಬಿರ ಹಾಗೂ ಇನ್ನಿತರ ಸಮಾಜ ಸೇವಾ ಕಾರ್ಯಕ್ರಮಗಳನ್ನು ಈ ಸಂಘಟನೆಯ ಅಧೀನದಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.
ರಶೀದ್ ರಾಶ್ ಬ್ಯಾರಿರವರು ಸಂಘಟನಾತ್ಮಕವಾಗಿ ಎಲ್ಲರೂ ಒಟ್ಟಾಗಿ ಸಮುದಾಯಕ್ಕಾಗಿ ದುಡಿದರೆ ಸಂಘಟನೆಯು ತನ್ನ ಧ್ಯೇಯದೊಂದಿಗೆ ಗುರಿ ಮುಟ್ಟುವಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ರಾಶ್ ಬ್ಯಾರಿ, ಝಹೀರ್, ಅಝೀಮ್,ನಿಯಾಝ್,ಡಾ.ಹಾರಿಸ್, ರಝಾಕ್, ಅರಫ,ಫಯಾಝ್,ಲತೀಫ್ ಮುಕ್ಕ, ಶಾಹಿದ್,ಉಮ್ಮರ್,ಮೆಹರೂಫ್,ಅಲ್ತಾಫ್ ಮುಂತಾದವರು ಉಪಸ್ಥಿತರಿದ್ದರು.