ಕಲ್ಲಾಪು: ಬಸ್ ಢಿಕ್ಕಿ; ಬೈಕ್ ಸವಾರ ಮೃತ್ಯು
ಉಳ್ಳಾಲ, ನ. 5: ರಾ.ಹೆ 66 ರ ಕಲ್ಲಾಪು ಅಡಂಕುದ್ರು ಬಳಿ ಖಾಸಗಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರವಿವಾರ ಸಂಜೆ ನಡೆದಿದೆ.
ಮೃತ ಯುವಕನನ್ನು ಉಳ್ಳಾಲ ಬೈಲ್ ಅನಿಲ ಕಂಪೌಂಡ್ ನಿವಾಸಿ ಮುಹಮ್ಮದ್ ಸಯ್ಯದ್ ಶಲೀಲ್ (19) ಎಂದು ಗುರುತಿಸಲಾಗಿದೆ. ಈತ ತುಂಬೆ ಕಾಲೇಜಿನಲ್ಲಿ ಬಿ.ಕಾಂ ವಿದ್ಯಾರ್ಥಿಯಾಗಿದ್ದು, ತಿಂಗಳ ಹಿಂದೆ ಉಳ್ಳಾಲದ ಪಾಂಡ್ಯರಾಜ್ ನರ್ಸಿಂಗ್ ಕಾಲೇಜಿಗೆ ಸೇರಿದ್ದ ಎನ್ನಲಾಗಿದೆ.
ಈತ ರವಿವಾರ ಮಂಗಳೂರಿನಿಂದ ಬೈಕಲ್ಲಿ ಉಳ್ಳಾಲ ಕಡೆ ತೆರಳುತ್ತಿದ್ದಾಗ ಅಡಂಕುದ್ರು ಬಳಿ ಬೈಕ್ ಸ್ಕಿಡ್ ಆಗಿ ಶಲೀಲ್ ರಸ್ತೆಗೆಸೆಯಲ್ಪಟ್ಟಿದ್ದು, ಈ ಸಂದರ್ಭ ಉಳ್ಳಾಲ ಕಡೆ ತೆರಳುತ್ತಿದ್ದ ಖಾಸಗಿ ಬಸ್ ಶಲೀಲ್ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story