Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಹೋರಾಟಗಾರರು ನಮ್ಮ ಸಂಸ್ಕೃತಿಯ ಕಡೆಗೆ ಮುಖ...

ಹೋರಾಟಗಾರರು ನಮ್ಮ ಸಂಸ್ಕೃತಿಯ ಕಡೆಗೆ ಮುಖ ಮಾಡಬೇಕು: ಪ್ರೊ. ಪುರುಷೋತ್ತಮ ಬಿಳಿಮಲೆ

ಡಿವೈಎಫ್ಐ ಕಾರ್ಯಕ್ರಮ

ವಾರ್ತಾಭಾರತಿವಾರ್ತಾಭಾರತಿ6 Nov 2017 7:40 PM IST
share
ಹೋರಾಟಗಾರರು ನಮ್ಮ ಸಂಸ್ಕೃತಿಯ ಕಡೆಗೆ ಮುಖ ಮಾಡಬೇಕು: ಪ್ರೊ. ಪುರುಷೋತ್ತಮ ಬಿಳಿಮಲೆ

ಮಂಗಳೂರು, ನ. 6: ಮಂಗಳೂರಿನ ಬಲ್ಮಠದ ಸಹೋದಯದಲ್ಲಿ ಡಿವೈಎಫ್ಐ  ಇಂದು ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೆಎನ್ ಯು  ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಜನಪದ ವಿದ್ವಾಂಸ ಪುರುಷೋತ್ತಮ ಬಿಳಿಮಲೆ ಅವರು ಉಪನ್ಯಾಸ ನೀಡಿದರು. 

ತುಳುನಾಡಿನ ಸಂಸ್ಕೃತಿಯ ಬಹುಮುಖ್ಯ ಭಾಗಗಳಾದ ದೈವ, ಭೂತ ಹಾಗೂ ಯಕ್ಷಗಾನ ಕಲೆಗಳ ಕುರಿತು, ಕಳೆದ ಒಂದೆರಡು ದಶಕಗಳಿಂದೀಚೆ ಅವುಗಳಲ್ಲಿ ಉಂಟಾದ ಬದಲಾವಣೆಗಳ ಕುರಿತು ಬಿಳಿಮಲೆಯವರು ಮಾತನಾಡಿದರು. 

ಕಳೆದ ನೂರು ವರ್ಷಗಳಲ್ಲಿ ತುಳುನಾಡಿನಲ್ಲಿ ಉಂಟಾದ ಬದಲಾವಣೆಗಿಂತ ಕಳೆದ 25 ವರ್ಷಗಳಲ್ಲಿ ತುಳುನಾಡಿನಲ್ಲಿ ಉಂಟಾದ ಬದಲಾವಣೆ ಹೆಚ್ಚು ವೇಗದ್ದು, ಎಂದು ಅವರು ಅಭಿಪ್ರಾಯಪಟ್ಟರು.

ಹೋರಾಟಗಾರರು ನಮ್ಮ ಸಂಸ್ಕೃತಿಯ ಕಡೆಗೆ ಮುಖ ಮಾಡಿ, ಅದರ ಸೂಕ್ಷ್ಮಗಳನ್ನು ಅರ್ಥಮಾಡಿಕೊಂಡು, ಅನಂತರ ಹೋರಾಟದಲ್ಲಿ ತೊಡಗಿಕೊಳ್ಳುವುದು ಅಗತ್ಯ ಎಂದು ಅವರು ಕಿವಿಮಾತು ಹೇಳಿದರು. 

ಕೇವಲ ಎರಡರಿಂದ ಮೂರು ಶೇಕಡಾದಷ್ಟು ಜನರು ಬ್ರಿಟಿಷ್ ವಸಾಹತುಷಾಹಿ ಕಾಲದಲ್ಲಿ ಕುಳಿತು ಕಟ್ಟಿದ ಚರಿತ್ರೆಯನ್ನು ಸಂಸ್ಕೃತಿ ಎನ್ನಲಾಗುತ್ತಿದೆ. ಆದರೆ ದೇಶದ ಶೇಕಡಾ 97ರಷ್ಟು ಜನ ಮೌಖಿಕವಾಗಿ ಉಳಿಸಿಕೊಂಡು ಹರಡುತ್ತಾ ಬಂದ ಜ್ಞಾನವನ್ನು ಕಡೆಗಣಿಸಲಾಗಿದೆ. ವೈದಿಕರು ಮತ್ತು ವಸಾಹತುಷಾಹಿ ಕುಳಿತು ಬರೆದಿಟ್ಟ ಜ್ಞಾನಕ್ಕಿಂತ, ನಮ್ಮ ಹೊಸತಲೆಮಾರು ಈ ದೇಶದ 97 ಭಾಗದಷ್ಟು ಜನರು ಕಾಯ್ದುಕೊಂಡು ಬಂದಿರುವ ಜ್ಞಾನವನ್ನು ಅರಿಯುವುದು ಬಹಳ ಮುಖ್ಯ ಎಂದು ಬಿಳಿಮಲೆ ತಿಳಿಸಿದರು. 

ನಮ್ಮ ಜನಪದ ಕಾವ್ಯಗಳು ಜನಸಾಮಾನ್ಯರ ಕಥೆ ಹೇಳುತ್ತದೆ. ಕೊರಗ ತನಿಯನ ಕಥೆಯನ್ನೇ ನೋಡಿ. ಅದರ ಕೇಂದ್ರ ಹಸಿವು. ನಮ್ಮ ದೈವಗಳು, ನಮ್ಮ ಭೂತಗಳು ಜನಸಾಮಾನ್ಯರು ದೈವತ್ವಕ್ಕೇರಿದ ಕಥನಗಳು. ರಾಮಕೃಷ್ಣರು ಹುಟ್ಟಿದಾಗ ಅವರ ಮೇಲೆ ಪುಷ್ಟಪವೃಷ್ಟಿಯಾದಂತೆ ಕೊರಗ ತನಿಯನ ಮೇಲೆ ಆಗುವುದಿಲ್ಲ. ಆತ ಹಸಿವಿನಿಂದ ಆಹಾರ ಹುಡುಕಿ ಹೊರಟು ದೇವಸ್ಥಾನದಲ್ಲಿ ಸಿಕ್ಕ ಹಣ್ಣನ್ನು ತಿಂದು ದೈವವಾಗುವ ಸಾಮಾನ್ಯ ವ್ಯಕ್ತಿ. ಹಾಗೆಯೇ ಕಲ್ಕುಡ ಕಲ್ಲುಡ್ತಿಯರು ಕೂಡಾ. ಅವರು ಯಾವ ದೇವರ ಅವತಾರವೂ ಅಲ್ಲ. ಅನ್ಯಾಯಕ್ಕೆ ಒಳಗಾಗಿ, ಸಿಡಿದೆದ್ದವರು. ಸತ್ತು ಸೇಡು ತೀರಿಸಿಕೊಂಡು ದೈವವಾದವರು. ಇಂಥ ಕಥನಗಳು ನಮ್ಮ ಅಧ್ಯಯನದ ಭಾಗವಾಗಬೇಕು ಎಂದು ಪುರುಷೋತ್ತಮ ಬಿಳಿಮಲೆಯವರು ಹೇಳಿದರು.

ಘೋಷಿತ ಧರ್ಮಗಳು ಲೌಕಿಕವನ್ನು ನಿರಾಕರಿಸುತ್ತವೆ. ಜನಪದ ಧರ್ಮಗಳು ಲೌಕಿಕವನ್ನು ಸರಿಪಡಿಸಲು ಯತ್ನಿಸುತ್ತವೆ. ನಾವು ಅವನ್ನು ಅನುಸರಿಸುವ ಮೂಲಕ ಲೌಕಿಕವನ್ನು ಸರಿಪಡಿಸುವ ಭಾಗವಾಗಬೇಕು ಎಂದು ಅವರು ಕರೆ ನೀಡಿದರು. 

ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿವೈಎಫ್ಐನ ಸಂತೋಷ್ ಬಜಾಲ್, ಬಿಕೆ ಇಮ್ತಿಯಾಝ್ ಹಾಗೂ ಇತರರು ಈ ಸಂದರ್ಭ ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X