ಫ್ಯಾಕ್ಟರಿ ಮಾಡಿನಿಂದ ಬಿದ್ದು ಮೃತ್ಯು
ಉಡುಪಿ, ನ.23: ಉಡುಪಿ ಅಂಬಾಗಿಲಿನ ಭಾರತ್ ಟೈಲ್ಸ್ ಪ್ಯಾಕ್ಟರಿಯ ಮಾಡಿನಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನ.22ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಹೊನ್ನಾವರ ತಾಲೂಕಿನ ಕುಲಕೋಡ್ ದೇವರಕಟ್ಟೆ ನಿವಾಸಿ ಶೇಷಗಿರಿ ಮೇಸ್ತ (62) ಎಂದು ಗುರುತಿಸಲಾಗಿದೆ. ಇವರು ಅಂಬಾಗಿಲಿನಲ್ಲಿ ಮುಚ್ಚಲ್ಪಟ್ಟ ಭಾರತ್ ಟೈಲ್ಸ್ ಪ್ಯಾಕ್ಟರಿಯ ಹೆಂಚು ಛಾವಣೆಯ ಕಟ್ಟಡಗಳನ್ನು ಮುರಿದು ತೆಗೆಯುವ ಕೆಲಸ ಮಾಡುತ್ತಿದ್ದಾಗ ಮಾಡಿನಿಂದ ಆಕಸ್ಮಿಕವಾಗಿ ಕಾಲು ಜಾರಿ ನೆಲಕ್ಕೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಉಡುಪಿ ಖಾಸಗಿ ಆಸ್ಪತ್ರೆಗೆ ಕರೆ ತರುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story