ಧರ್ಮಸಂಸದ್ ಚುನಾವಣೆಗಾಗಿ ಅಲ್ಲ: ತೊಗಾಡಿಯಾ
ಉಡುಪಿ, ನ.23: ಧರ್ಮಸಂಸದ್ನ್ನು ಚುನಾವಣೆಯ ದೃಷ್ಠಿಯಲ್ಲಿ ಹಾಗೂ ರಾಜಕೀಯ ಕಾರಣಕ್ಕಾಗಿ ಮಾಡುತ್ತಿಲ್ಲ. ಇದಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ. ಹಿಂದೂ ಸಮಾಜ ಒಂದೇ ಇದರ ಉದ್ದೇಶ ಎಂದು ವಿಎಚ್ಪಿ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.
ಧರ್ಮಸಂಸದ್ ನಡೆಯುವ ಕಲ್ಸಂಕ ರಾಯಲ್ ಗಾರ್ಡನ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಧರ್ಮಸಂಸದ್ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಇದು ಸಂಸ್ಕೃತಿಯ ಮಾರ್ಗದರ್ಶನಕ್ಕಾಗಿ ನಡೆಯುತ್ತದೆಯೇ ಹೊರತು ರಾಜಕೀಯ ಮಾರ್ಗದರ್ಶನಕ್ಕೆ ಅಲ್ಲ ಎಂದರು.
ಈ ಧರ್ಮ ಸಂಸದ್ನಲ್ಲಿ ಅಸ್ಪಶ್ಯತೆ ನಿವಾರಣೆ, ಗೋರಕ್ಷಣೆಗೆ ಕೇಂದ್ರದ ಕಾನೂನು, ರಾಮ ಮಂದಿರ ನಿರ್ಮಾಣ, ಮಠ, ಮಂದಿರಗಳ ಸರಕಾರೀಕರಣ ತಡೆಯುವ ಕುರಿತು ಸಂತರ ಮಾರ್ಗದರ್ಶನದಲ್ಲಿ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಅವರು ತಿಳಿಸಿದರು.
ಲಿಂಗಾಯತ ಧರ್ಮ ಸೇರಿದಂತೆ ವಿವಿಧ ಜಾತಿಗಳು ಹಿಂದೂ ಧರ್ಮದ ಸಹೋದರರು. ನಮ್ಮ ಸಹೋದರರನ್ನು ಬೇರೆ ಮಾಡಲು ಯಾರಿಗೂ ಆಗಲ್ಲ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
Next Story