ಬೀದಿಬದಿಯಲ್ಲಿದ್ದ ಅಂಧ ಕಲಾವಿದರ ಪ್ರತಿಭೆಗೆ ಮನ ಸೋತ ನಟ ಉಪೇಂದ್ರ
ಬೆಳ್ತಂಗಡಿ, ಡಿ.5: ಜೀವನ ನಿರ್ವಹಣೆಗಾಗಿ ಬೀದಿಬದಿಯಲ್ಲಿ ಹಾಡುತ್ತಾ ದೇಣಿಗೆ ಯಾಚಿಸುತ್ತಿದ್ದ ಅಂಧ ಕಲಾವಿದರಿಗೆ ನೆರವಾಗುವ ಮೂಲಕ ಖ್ಯಾತ ಚಿತ್ರನಟ ಉಪೇಂದ್ರ ಸುದ್ದಿಯಾಗಿದ್ದಾರೆ.
ಇತ್ತೀಚೆಗೆ ಉಜಿರೆ ಸಮೀಪ ಕಾರಿನಲ್ಲಿ ಸಂಚರಿಸುತ್ತಿದ್ದ ಉಪೇಂದ್ರ ಅವರು ರಸ್ತೆ ಬದಿಯಲ್ಲಿ ಹಾಡುತ್ತಾ ದೇಣಿಗೆ ಯಾಚಿಸುತ್ತಿದ್ದ ಅಂಧ ಕಲಾವಿದರನ್ನು ನೋಡಿದ್ದಾರೆ. ತಕ್ಷಣ ಕಾರನ್ನು ನಿಲ್ಲಿಸಿದ ಉಪೇಂದ್ರ ಅವರು ಅಂಧ ಕಲಾವಿದರ ಬಳಿ ತೆರಳಿದ್ದಾರೆ. ಬಳಿಕ ಸ್ವಲ್ಪ ಹೊತ್ತು ಆ ಕಲಾವಿದರೊಂದಿಗೆ ಬೆರೆತು ಅವರ ಪ್ರತಿಭಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಕಲಾವಿದರಿಗೆ ಒಂದಿಷ್ಟು ಆರ್ಥಿಕ ನೆರವು ನೀಡಿ ಶುಭ ಹಾರೈಸಿದರು.
ಸದ್ಯ ನೂತನ ಪಕ್ಷದೊಂದಿಗೆ ರಾಜಕೀಯ ಅಖಾಡಕ್ಕೆ ಇಳಿದಿರುವ ಉಪೇಂದ್ರ ಅವರು ಯಾವುದೇ ಅಹಂಕಾರ ಇಲ್ಲದೆ ಅಂಧ ಕಲಾವಿದರ ಬಗ್ಗೆ ತೋರಿದ ಪ್ರೀತಿಗೆ ಸಾರ್ವಜನಿಕರ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.
Next Story