ಡಿ. 10ರಂದು ಅಳೇಕಲದಲ್ಲಿ 'ಮೀಲಾದ್ ಜಲ್ಸಾ-2017'
ಉಳ್ಳಾಲ, ಡಿ. 9: ಖಾಝಿ ಅಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ರವರ ದುಆ ಆಶೀರ್ವಾದ ದೊಂದಿಗೆ ನಜಾತುಸ್ಸಿಬಿಯಾನ್ ಮದ್ರಸ ಅಳೇಕಲ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಬುರ್ದಾ ಮಜ್ಲಿಸ್ ಡಿ.10ರಂದು ಮರ್ಹೂಂ ಎಸ್.ಎಂ ತಂಙಳ್ ವೇದಿಕೆಯಲ್ಲಿ ನಡೆಯಲಿದೆ.
ಜಲಾಲ್ ತಂಙಳ್ ದುಆ ನೆರೆವೇರಿಸಲಿದ್ದಾರೆ. ಹಾಜಿ ಯು.ಎಸ್. ಹಂಝ ಅಧ್ಯಕ್ಷತೆ ವಹಿಸಲಿದ್ದಾರೆ. ಮಸೀದಿಯ ಖತೀಬ್ ಅಬು ಝಿಯಾದ್ ಮದನಿ ಉದ್ಘಾಟಿಸಲಿದ್ದಾರೆ. ಸೈಯದ್ ಮದನಿ ಮೊಹಲ್ಲಾ ಒಕ್ಕೂಟದ ಅಧ್ಯಕ್ಷ ಶಿಹಾಬುದ್ದೀನ್ ಸಖಾಫಿ ಭಾಷಣ ಮಾಡಲಿದ್ದಾರೆ.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್, ಉಳ್ಳಾಲ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಕೆ.ಆರ್. ಗೋಪಿಕೃಷ್ಣ, ಸೈಯದ್ ಮದನಿ ದರ್ಗಾ ಸಮಿತಿ ಸದಸ್ಯ ಯು.ಫಾರೂಕ್, ಶರೀಫ್, ಮಾರ್ಗತಲೆ ಮಸೀದಿಯ ಅಧ್ಯಕ್ಷ ಹನೀಫ್ ಹಾಜಿ, ಮಂಚಿಲ ಮಸೀದಿಯ ಅಧ್ಯಕ್ಷ ಮಕ್ಸೂದ್, ಹಳೆಕೋಟೆ ತಾಜುಲ್ ಉಲೆಮಾ ಮದ್ರಸ ಅಧ್ಯಕ್ಷ ಯೂಸುಫ್ ಹಳೆಕೋಟೆ, ಸೈಯದ್ ಮದನಿ ಮೊಹಲ್ಲಾ ಒಕ್ಕೂಟದ ಪ್ರ. ಕಾರ್ಯದರ್ಶಿ ಹಮೀದ್ ಮಂಚಿಲ, ಸೈಯದ್ ಮದನಿ ಅರೆಬಿಕ್ ಟ್ರಸ್ಟ್ ನ ಮಾಜಿ ಪ್ರ.ಕಾರ್ಯದರ್ಶಿ ಝಿಯಾದ್ ತಂಙಲ್ ಭಾಗವಹಿಸಲಿದ್ದಾರೆ ಎಂದು ಮಸೀದಿಯ ಪ್ರ.ಕಾರ್ಯದರ್ಶಿ ಅಶ್ರಫ್ ಯು.ಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.