ಜಿಗ್ನೇಷ್ ಮೆವಾನಿಗೆ ಗೆಲುವು: ಎಸ್ಡಿಪಿಐ ಹರ್ಷ
ಮಂಗಳೂರು, ಡಿ.18: ಗುಜರಾತ್ ವಿಧಾನ ಸಭಾ ಚುನಾವಣೆಯಲ್ಲಿ ವಡ್ಗಂ ಕ್ಷೇತ್ರದಿಂದ ಸ್ಪರ್ಧಿಸಿರುವ ಜಿಗ್ನೇಷ್ ಮೆವಾನಿ ಭರ್ಜರಿ ಜಯ ಗಳಿಸಿರುವುದಕ್ಕೆ ಎಸ್ಡಿಪಿಐ ಹರ್ಷ ವ್ಯಕ್ತಪಡಿಸಿದೆ.
ದಲಿತರ ಧ್ವನಿಯಾಗಿದ್ದ ಜಿಗ್ನೇಷ್ ಮೆವಾನಿ ಜೀವನವೇ ಹೋರಾಟವಾಗಿತ್ತು. ಈ ಜಯವು ದಲಿತ ಹಿಂದುಳಿದ ವರ್ಗದ ಹೋರಾಟದ ಜಯ ಎಂದು ಎಸ್ಡಿಪಿಐ ಮಂಗಳೂರು ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ಹಾರಿಸ್ ಮಲಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story