ರೈಲು ಹಳಿಯಲ್ಲಿ ಬಿರುಕು: ಕಾಸರಗೋಡು-ಕಣ್ಣೂರು ರೈಲು ಸಂಚಾರ ಅಸ್ತವ್ಯಸ್ತ
ಕಾಸರಗೋಡು, ಜ.3: ರೈಲು ಹಳಿಯಲ್ಲಿ ಬಿರುಕು ಕಂಡುಬಂದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಕಾಸರಗೋಡು - ಕಣ್ಣೂರು ನಡುವೆ ರೈಲು ಸಂಚಾರ ಅಸ್ತವ್ಯಸ್ತ ಗೊಂಡಿತ್ತು.
ಕಾಸರಗೋಡು ಸಮೀಪದ ಉದುಮದಲ್ಲಿ ಹಳಿ ಬಿರುಕು ಬಿಟ್ಟಿತ್ತು. ಸಕಾಲದಲ್ಲಿ ಇದನ್ನು ಗಮನಿಸಿದ ಸಿಬ್ಬಂದಿ ಹಳಿಯನ್ನು ದುರಸ್ತಿಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಹಳಿ ಬಿರುಕು ಬಿಟ್ಟ ಹಿನ್ನೆಲೆಯಲ್ಲಿ ಮಂಗಳೂರು - ತಿರುವನಂತಪುರ ಪರಶುರಾಮ್ ಎಕ್ಸ್ ಪ್ರೆಸ್ ಸೇರಿದಂತೆ ಎಲ್ಲಾ ರೈಲುಗಳನ್ನು ಅಲ್ಲಲ್ಲಿ ನಿಲುಗಡೆಗೊಳಿಸಲಾಗಿತ್ತು. ಹಳಿಯನ್ನು ತಾತ್ಕಾಲಿಕ ದುರಸ್ತಿಗೊಳಿಸಿದ ಬಳಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
Next Story