ಕಾರವಾರ ಜೈಲಿನಲ್ಲಿ ಖೈದಿ ಆತ್ಮಹತ್ಯೆ
ಕಾರವಾರ, ಜೂ. 21: ಕಾರವಾರ ಜೈಲಿನಲ್ಲಿದ್ದ ಖೈದಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ.
ಕಾರ್ಕಳ ನಿವಾಸಿ ಉಮೇಶ್ (38) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ.
2017ರ ಮೇ 19ರಂದು ಮೂಲತ ಮಡಿಕೇರಿಯ ಉಮೇಶ್ ನೀಲಿವರ ಭದ್ರಯ್ಯ (38) ಕಾರ್ಕಳದಲ್ಲಿ ನಡೆದ ಕೊಲೆಯೊಂದರ ಸಂಬಂಧ ಬಂಧಿತರಾಗಿ ಹಿರಿಯಡ್ಕದ ಅಂಜಾರಿನ ಜೈಲಿನಲ್ಲಿದ್ದರು. ಜೈಲಿನ ರಿಪೇರಿಗಾಗಿ ಇಲ್ಲಿನ ಎಲ್ಲಾ ಖೈದಿಗಳನ್ನು ಕಾರವಾರ ಜೈಲಿಗೆ ವರ್ಗಾಯಿಸಿದಂತೆ ಉಮೇಶ್ ನ್ನು ಸಹ 2018ರ ಜ.20ಕ್ಕೆ ಕಾರವಾರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು.
ಕಳೆದ ಕೆಲವು ದಿನಗಳಿಂದ ಮಾನಸಿಕ ಅಸ್ವಸ್ಥನಂತೆ ವರ್ತಿಸುತಿದ್ದ ಈತ ಇಂದು ಜೈಲ್ ಸೆಲ್ನ ಬಾಗಿಲಿಗೆ ಟವೆಲ್ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
Next Story