ಬೆಳ್ಮದೋಟ: ಎ.3ರಿಂದ 20ನೆ ಕುತುಬಿಯತ್, ಬುರ್ದಾ ಮಜ್ಲಿಸ್
ಉಳ್ಳಾಲ. ಮಾ, 25: ಇರ್ಶಾದುಸ್ಸಿಬಿಯನ್ ಹಳೇ ವಿದ್ಯಾರ್ಥಿ ಸಂಘ ಬೆಳ್ಮದೋಟ ವತಿಯಿಂದ 20ನೇ ಕುತುಬಿಯತ್ ವಾರ್ಷಿಕ ಹಾಗೂ 3ದಿವಸಗಳ ಧಾರ್ಮಿಕ ಕಾರ್ಯಕ್ರಮ ಎಪ್ರಿಲ್ 3,4,5 ರಂದು ತಾಜುಲ್ ಉಲಮಾ ವೇದಿಕೆ ಬೆಳ್ಮದೋಟದಲ್ಲಿ ನಡೆಯಲಿದೆ.
3ರಂದು ಬುರ್ದಾ ಮಜ್ಲಿಸ್ ಮಖ್ದೂಮಿಯಾ ಬುರ್ದಾ ಇಖ್ವಾನ್ ಖಾದಿಸಿಯ್ಯಾ ಕೊಲ್ಲಂ ಆಲಾಪನೆ ಮಡಲಿದ್ದು ಯಾಸೀನ್ ಜೌಹರಿ ಕೊಲ್ಲಂ ನೇತೃತ್ವದಲ್ಲಿ ಖ್ಯಾತ ಹಾಡುಗಾರ ಅಫ್ಜಲ್ ಕಣ್ಣೂರು ಭಾಗವಹಿಸಲ್ಲಿದ್ದಾರೆ.
4ರಂದು ಅಸ್ಸಯ್ಯದ್ ಪಝಲ್ ಮುತ್ತುಕೋಯ ತಂಙಳ್ ಕಲ್ಕಟ್ಟ ದುಅ ನೇತೃತ್ವವಹಿಸಲ್ಲಿದ್ದು ಎಸ್ಸೆಸ್ಸೆಫ್ ಜಿಲ್ಲಾ ಉಪಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
5ರಂದು ಪೊಸೋಟ್ ತಂಙಳ್ ಅನುಸ್ಮರಣೆ ಮತ್ತು ಸಮಾರೋಪ ಸಮಾರಂಭ ಮುಹಮ್ಮದ್ ಸುಹೈಲ್ ಅಸ್ಸಖಾಫತ್ ತಂಙಳ್ ಮಡಕರ ಕೇರಳ ನೇತೃತ್ವ ವಹಿಸಲಿದ್ದು ಬೆಳ್ಮ ದೋಟ ಜುಮಾ ಮಸೀದಿ ಖತೀಬ್ ಅಬ್ದುಲ್ ಅಝೀರ್ ಸಅದಿ ಅಲ್-ಅಫ್ಳಲಿ ಮುಖ್ಯ ಪ್ರಭಾಷನ ಮಾಡಲಿದ್ದು ಸಚಿವ ಯು.ಟಿ ಖಾದರ್, ಮೂಡ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.