ಮಾಜಿ ಸಚಿವ ಬಿ.ಎ.ಮೊಹಿದೀನ್ ನಿಧನ : ಮುಸ್ಲಿಂ ಸಮಾಜ ಬಂಟ್ವಾಳ ಸಂತಾಪ
ಬಂಟ್ವಾಳ, ಜು.12 : ಮಾಜಿ ಸಚಿವ ಬಿ.ಎ.ಮೊಹಿದೀನ್ ನಿಧನಕ್ಕೆ ಮುಸ್ಲಿಂ ಸಮಾಜ ಬಂಟ್ವಾಳ ಸಂತಾಪ ವ್ಯಕ್ತಪಡಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ಬಿ.ಎ.ಮೊಹಿದೀನ್ ಅವರು ವಿಶಾಲ ಮನೋಭಾವದ ಸದ್ಗುಣ ವ್ಯಕ್ತಿತ್ವ ಹೊಂದಿದವರು. ಎಲ್ಲ ಜಾತಿ, ಜನಾಂಗದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಅಲ್ಲದೆ, ಅಲ್ಪಸಂಖ್ಯಾತ, ಹಿಂದುಳಿದ, ದಲಿತ, ಶೋಷಿತ ವರ್ಗದವರ ಶ್ರೆಯೋಭಿವೃದ್ಧಿಗೆ ಶ್ರಮಿಸಿದರಲ್ಲದೆ, ಶಿಕ್ಷಣದ ಬಗ್ಗೆ ಕ್ರಾಂತಿಯನ್ನೇ ಮಾಡಿದ್ದಾರೆ.
ಕರ್ನಾಟಕ ಸರಕಾರ ಅವರ ಸಮಾಜ ಸೇವೆ ಪರಿಗಣಿಸಿ ದಿ. ದೇವರಾಜ ಅರಸು ಪ್ರಶಸ್ತಿ ನೀಡಿ ಗೌರವಿಸಿರುವುದು ಅವರ ಸೇವೆಗೆ ಸಾಕ್ಷಿಯಾಗಿದೆ. ಅವರ ದಿವ್ಯಚೇತನಕ್ಕೆ ಭಾವಪೂರ್ಣವಾದ ಸಂತಾಪ ಸೂಚಿಸುತ್ತೇವೆ ಎಂದು ಮುಸ್ಲಿಂ ಸಮಾಜ ಬಂಟ್ವಾಳ ಪ್ರಕಟನೆಯಲ್ಲಿ ತಿಳಿಸಿದೆ.
Next Story