ಆಭರಣ ಜುವೆಲ್ಲರ್ಸ್ನಿಂದ ‘ಮುಂಗಾರು ಮೇಳ’
ಉಡುಪಿ, ಜು.23: ಉಡುಪಿಯ ಪ್ರಸಿದ್ಧ ಚಿನ್ನಾಭರಣಗಳ ಸಂಸ್ಥೆ ಆಭರಣ ಜುವೆಲ್ಲರ್ಸ್ ಇಂದಿನಿಂದ ಆ.8ರವರೆಗೆ ತನ್ನ ಎಂಟು ಶಾಖೆಗಳಲ್ಲಿ ‘ಮುಂಗಾರು ಮೇಳ-20018’ನ್ನು ಆಯೋಜಿಸಿದ್ದು, ಈ ವೇಳೆ ಗ್ರಾಹಕರಿಗೆ ಅನೇಕ ವಿಧದ ವಿಶೇಷ ಕೊಡುಗೆಗಳನ್ನು ನೀಡಲಿದೆ ಎಂದು ಸಂಸ್ಥೆಯ ಹಣಕಾಸು ವಿಭಾಗದ ಮುಖ್ಯಸ್ಥ ವಿನೋದ್ ಕುಮಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ, ಶಿವಮೊಗ್ಗ, ಮಂಗಳೂರು, ಕಾರ್ಕಳ, ಕುಂದಾಪುರ, ಹೆಬ್ರಿ, ಬೈಂದೂರು, ಬ್ರಹ್ಮಾವರ, ಚಿಕ್ಕಮಗಳೂರಿನಲ್ಲಿರುವ ಆಭರಣ ಜುವೆಲ್ಲರ್ ಶಾಖೆಗಳಲ್ಲಿ ಈ ವಿಶೇಷ ಕೊಡುಗೆಗಳು ಗ್ರಾಹಕರಿಗೆ ಲಭ್ಯವಿದೆ ಎಂದರು.
ಆಭರಣಗಳನ್ನು ಖರೀದಿಸುವಾಗ ಪ್ರತಿ ಒಂದು ಗ್ರಾಂ ಚಿನ್ನಕ್ಕೆ 100ರೂ. ಹಿಂಪಡೆಯುವ ಅವಕಾಶ (ಕ್ಯಾಶ್ಬ್ಯಾಕ್), ಬೆಳ್ಳಿ ಸಾಮಗ್ರಿಗಳಿಗೆ ಗ್ರಾಂ ಒಂದರ 1.50ರೂ. ರಿಯಾಯಿತಿ, ಬೆಳ್ಳಿ ಆಭರಣಗಳಿಗೆ ಶೇ.10ರಷ್ಟು ರಿಯಾಯಿತಿ, ಉಡುಗೊರೆ ಸಾಮಗ್ರಿಗಳಿಗೆ ಶೇ.5ರಷ್ಟು ರಿಯಾಯಿತಿ, ವಜ್ರಾಭರಣಗಳಲ್ಲಿ ವಜ್ರದ ಪ್ರತಿ ಕ್ಯಾರೆಟ್ಗೆ 4000ರೂ. ರಿಯಾಯಿತಿ, ವಜ್ರಾಭರಣ ಖರೀದಿ ವೇಳೆ ಹಳೆಯ ಚಿನ್ನಾಭರಣಗಳ ವಿನಿಮಯಕ್ಕೆ ಪ್ರತಿ ಗ್ರಾಂಗೆ 75 ರೂ. ಹೆಚ್ಚುವರಿ, ಪ್ಲಾಟಿನಂ ಆಭರಣಗಳಿಗೆ ಶೇ.10 ರಿಯಾಯಿತಿ ಹಾಗೂ ವಾಚ್ಗಳಿಗೆ ಶೇ.5ರಿಂದ 10ರಷ್ಟು ರಿಯಾಯಿತಿ ದೊರೆಯಲಿದೆ ಎಂದರು.
ಆಭರಣ ಸಂಸ್ಥೆ ಶೀಘ್ರವೇ ಪಡುಬಿದ್ರಿ ಸೇರಿದಂತೆ ಅನೇಕ ಕಡೆಗಳಲ್ಲಿ ಹೊಸ ಶಾಖೆಗಳನ್ನು ತೆರೆಯಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸೇಲ್ಸ್ ಮ್ಯಾನೇಜರ್ ಅಜಿತ್ ನಾಯಕ್, ಕಚೇರಿ ವ್ಯವಸ್ಥಾಪಕ ಮುರಳೀಧರ ಆಚಾರ್ಯ ಹಾಗೂ ಮಾರ್ಕೆಟಿಂಗ್ ಮ್ಯಾನೇಜರ್ ದಿನೇಶ್ ಶೆಟ್ಟಿಗಾರ್ ಉಪಸ್ಥಿತರಿದ್ದರು.