ಇಸ್ಪೀಟು ಜುಗಾರಿ: 10 ಮಂದಿ ಬಂಧನ
ಉಡುಪಿ, ಜು.23: ಅಂಬಾಗಿಲು ಬಳಿಯ ಸದಾಮಣೆ ಟ್ರೇಡ್ಸ್ ಹಿಂಭಾಗ ಜು.22ರಂದು ಮಧ್ಯಾಹ್ನ ವೇಳೆ ಇಸ್ಪೀಟ್ ಜುಗಾರಿ ಆಡುತ್ತಿದ್ದ ಬಳ್ಳಾರಿ ಜಿಲ್ಲೆಯ ಸಿದ್ದೇಶ(23), ಮಹೇಶ ಆದಿಕರ್ನಾಟಕ(48), ಮಾರಣ್ಣ(30), ಮಲ್ಲಿ ಕಾರ್ಜುನ(25), ತಿಪ್ಪೆರುದ್ರ(22), ಚಿತ್ರದುರ್ಗ ಜಿಲ್ಲೆಯ ನಾಗರಾಜ(45) ಎಂಬವರನ್ನು ಉಡುಪಿ ಸೆನ್ ಅಪರಾಧ ಪೊಲೀಸರು ಬಂಧಿಸಿ, 3,200ರೂ. ನಗದು ವಶಪಡಿಸಿಕೊಂಡಿದ್ದಾರೆ.
ಮಲ್ಪೆ: ಮಲ್ಪೆಬಂದರಿನ ಸಾಹುಕಾರು ಬಾರಿನ ಬಳಿ ಜು.23ರಂದು ಮಧ್ಯಾಹ್ನ ವೇಳೆ ಇಸ್ಪೀಟು ಜುಗಾರಿ ಆಡುತ್ತಿದ್ದ ರಾಮ, ಪದ್ಮನಾಭ, ಇಮ್ರಾನ್ ಖಾನ್, ದಿವಾಕರ ಎಂಬವರನ್ನು ಮಲ್ಪೆ ಪೊಲೀಸರು ಬಂಧಿಸಿ, 1750ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story