Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಇತಿಹಾಸದ ಭಾರ ವರ್ತಮಾನದ ಮೇಲೆ ಹೇರಿಕೆ...

ಇತಿಹಾಸದ ಭಾರ ವರ್ತಮಾನದ ಮೇಲೆ ಹೇರಿಕೆ ದೊಡ್ಡ ಕ್ರೌರ್ಯ: ಪ್ರೊ. ರಹಮತ್ ತರೀಕೆರೆ

ವಾರ್ತಾಭಾರತಿವಾರ್ತಾಭಾರತಿ11 Aug 2018 2:47 PM IST
share
ಇತಿಹಾಸದ ಭಾರ ವರ್ತಮಾನದ ಮೇಲೆ ಹೇರಿಕೆ ದೊಡ್ಡ ಕ್ರೌರ್ಯ: ಪ್ರೊ. ರಹಮತ್ ತರೀಕೆರೆ

ಮಂಗಳೂರು, ಆ.11: ಸಮಾಜದಲ್ಲಿಂದು ಇತಿಹಾಸದ ಭಾರವನ್ನು ವರ್ತಮಾನದ ಮೇಲೆ ಹೇರಿಕೆ ಮಾಡುವ ಪ್ರಸಂಗಗಳು ಹೆಚ್ಚುತ್ತಿದ್ದು ಇದು ಅತಿ ದೊಡ್ಡ ಕ್ರೌರ್ಯ. ಇಂತಹ ಸನ್ನಿವೇಶದಲ್ಲಿ ಇತಿಹಾಸದ ಪುಸ್ತಕಗಳ ಓದು ಪೂರ್ವಾಗ್ರಹವನ್ನು ದೂರೀಕರಿಸುತ್ತದೆ ಎಂದು ಪ್ರೊ. ರಹಮತ್ ತರೀಕೆರೆ ಅಭಿಪ್ರಾಯಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಸಾಹಿತ್ಯದ ಓದು ಕ್ಷೀಣಿಸುತ್ತಿದೆ. ವ್ಯಕ್ತಿಗಳನ್ನು ವಿಜೃಂಭಿಸುವ ಈ ಕಾಲಘಟ್ಟದಲ್ಲಿ ಇತಿಹಾಸದ ಘಟನೆಗಳಿಗೆ ಸಾಕ್ಷಿಯಾಗಿರುವ ಪುಸ್ತಕಗಳಿಗೆ ಒತ್ತು ನೀಡಿ ನಡೆಸುವ ಇಂತಹ ಕಾರ್ಯಕ್ರಮ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಧರ್ಮ ಒಂದು ಆಯುಧವಾಗಿ ತನ್ನದೇ ದೇಶದ ನಾಗರಿಕರ ನಡುವೆ ಪರಸ್ಪರ ಯುದ್ಧದ ವಾತಾವರಣವನ್ನು ಸೃಷ್ಟಿಸುವ ನತದೃಷ್ಟ ದೇಶಗಳಲ್ಲಿ ನಮ್ಮದೂ ಒಂದು. ಇತಿಹಾಸ ಮತ್ತು ಧರ್ಮ ರಾಜಕಾರಣ ಸೃಷ್ಟಿ ಮಾಡಿರುವ ಹಿಂಸೆಗೆ ಎಲ್ಲ ಪ್ರದೇಶಗಳ, ಭಾಷೆಯ ಜನರು ಬೆಲೆ ತೆರುತ್ತಿದ್ದಾರೆ. ತಮ್ಮ ವಿಚಾರವನ್ನು ಮಂಡಿಸಿದಕ್ಕಾಗಿಯೇ ಜ್ಞಾನ ಪೀಠ ಪುರಸ್ಕೃತರಾಗಿರುವಂತಹ ಲೇಖಕರು ಕೊಲೆಗೀಡಾಗುವುದು, ಹಿಟ್ ಲಿಸ್ಟ್‌ನಲ್ಲಿರುವುದು ಆತಂಕಕಾರಿ ಬೆಳವಣಿಗೆ. ಧರ್ಮದ ಹೆಸರಿನಲ್ಲಿ ವ್ಯವಸ್ಥಿತವಾದ ಒಂದು ಪಡೆ ಸಮಾಜವನ್ನು ಆಕ್ರಮಿಸುತ್ತಿರುವಾಗ ಪುಸ್ತಕದ ಓದಿನ ಮೂಲಕ ಸಮಾಜಕ್ಕೆ ದಾರಿದೀಪವಾಗುತ್ತಿರುವುದು ಬಿರುಗಾಳಿಯ ಎದುರು ಸಣ್ಣ ದೀಪದ ರೀತಿಯ ಹೋರಾಟವೇ ಸರಿ ಎಂದು ಅಭಿಪ್ರಾಯಿಸಿದರು.

ಸಮುದಾಯ, ಧರ್ಮವನ್ನು ಬೇರೆಯವರು ಕಟ್ಟಿಕೊಟ್ಟ ಗ್ರಹಿಕೆ, ಚೌಕಟ್ಟು, ಕಥನಗಳ ಮೂಲಕ ಅರ್ಥ ಮಾಡಿಕೊಳ್ಳುವುದು, ಸಮುದಾಯದ ದುಷ್ಟತನವನ್ನು ಹುಡುಕುವುದು ಇಂದು ಸಮಾಜದಲ್ಲಿ ಅತಿಯಾಗುತ್ತಿದೆ. ಇದರ ಭಾಗವಾಗಿ ಇದೀಗ ಗಾಂಧಿ, ನೆಹರೂವಿನಂತಹ ಮಹಾನ್ ನಾಯಕರನ್ನೂ ದುಷ್ಟೀಕರಿಸುವ ಕಾರ್ಯ ನಡೆಯುತ್ತಿದೆ. ಟಿಪ್ಪು ಸುಲ್ತಾನನ ಮತಾಂತರದ ಬಗ್ಗೆ ಮಾತನಾಡುವವರು, ಶೃಂಗೇರಿ ಗುರುಗಳಿಗೆ ಪತ್ರ ಬರೆದ ಬಗ್ಗೆ ಮೌನ ವಹಿಸುತ್ತಾರೆ ಎಂದರು.

ಬ್ರಾಹ್ಮಣರು ಜಾತಿವಾದಿಗಳು, ಮುಸ್ಲಿಮರು ಕ್ರೂರಿಗಳು, ದಲಿತರು ಕೊಳಕರು ಎಂಬ ಪಡಿಯಚ್ಚುಗಳು ಇತಿಹಾಸದಲ್ಲಿ ತುಂಬಿ ಹೋಗಿದ್ದು, ಅವುಗಳನ್ನು ಒಡೆಯಬೇಕಾದ ಕೆಲಸವನ್ನು ನಾವಿಂದು ಮಾಡಬೇಕಾಗಿದೆ. ಎಲ್ಲಾ ಧರ್ಮ, ಸಮುದಾಯಗಳಲ್ಲೂ ಒಳ್ಳೆಯವರು, ಕೆಟ್ಟವರು ಇರುತ್ತಾರೆ. ಸಮಾಜದ ಜನ ಬದಲಾಗುತ್ತಾರೆ ಎಂಬ ಇತಿಹಾಸದ ಸತ್ಯಗಳನ್ನು ಪುಸ್ತಕಗಳು ಕಟ್ಟಿ ಕೊಡುತ್ತವೆ. ಹಾಗಾಗಿ ಸತ್ಯವನ್ನು ಆತ್ಮಾವಲೋಕಿಸುವುದು ಇಂದಿನ ಅತೀ ಅಗತ್ಯಗಳಲ್ಲಿ ಒಂದು. ಇತಿಹಾಸ ವರ್ತಮಾನದಲ್ಲಿ ಭವಿಷ್ಯವನ್ನು ರೂಪಿಸುವಂತಾಗಬೇಕೇ ಹೊರತು ಸಮಾಜವನ್ನು ಒಡೆಯುವ ಆಯುಧವಾಗಬಾರದು ಎಂದು ಅವರು ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X