ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ
ಉಡುಪಿ, ಆ.12: ಪರ್ಯಾಯ ಶ್ರೀಪಲಿಮಾರು ಮಠದ ಆಶ್ರಯದಲ್ಲಿ ಉಡುಪಿಯ ಹೆಜ್ಜೆ-ಗೆಜ್ಜೆ ಪ್ರತಿಷ್ಠಾನದ ರಜತ ಮಹೋತ್ಸವದ ಅಂಗವಾಗಿ ರಾಜಾಂಗಣದಲ್ಲಿ ರವಿವಾರ ಏರ್ಪಡಿಸಲಾದ ರಾಜ್ಯಮಟ್ಟದ ಸಬ್-ಜೂನಿ ಯರ್ ಭರತನಾಟ್ಯ ಸ್ಪರ್ಧೆಯ ವಿಜೇತರಿಗೆ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಬಹುಮಾನವನ್ನು ವಿತರಿಸಿದರು.
ಬಳಿಕ ಆಶೀರ್ವಚನ ನೀಡಿದ ಸ್ವಾಮೀಜಿ, ಸಣ್ಣ ಮಕ್ಕಳ ಅದ್ಭುತ ಪ್ರದರ್ಶನದ ಮೂಲಕ ರಾಜಾಂಗಣವು ದೇವಲೋಕವಾಗಿ ಪರಿಗಣಿತವಾಗಿದೆ. ಹೆಜ್ಜೆ ಗೆಜ್ಜೆ ಪ್ರತಿಷ್ಠಾನವು ದೇವತೆಗಳ ತ್ರಿಭಂಗಿ ಮಧುರಾಕೃತಿ ಎಂಬಂತೆ ಭರತನಾಟ್ಯ ಕಲೆಯಲ್ಲಿರುವ ಸೊಭಗನ್ನು ಮಕ್ಕಳಲ್ಲಿ ಅರಳಿಸಿ, ಸಮಾಜದಲ್ಲಿ ಉತ್ತಮ ನೃತ್ಯ ವಿದ್ಯಾರ್ಥಿಗಳನಾ್ನಗಿ ರೂಪಿಸುತ್ತಿದೆ ಎಂದು ಹೇಳಿದರು.
ಪ್ರಥಮ ಪ್ರಶಸ್ತಿ ವಿಜೇತರಿಗೆ ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರವನ್ನು, ದ್ವಿತೀಯ ಮತ್ತು ತೃತೀಯ ಪ್ರಶಸ್ತಿ ವಿಜೇತರಿಗೆ ಆಕರ್ಷಕ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಯಿತು. ಸ್ಪರ್ಧೆಯ ತೀರ್ಪುಗಾರರಾದ ವಿದುಷಿ ಸುಮಾ ಕೃಷ್ಣಮೂರ್ತಿ ಬೆಂಗಳೂರು, ವಿದುಷಿ ಅಪೂರ್ವ ಸಮೀರ್ ರಾವ್ ಮೈಸೂರು ಮತ್ತು ವಿದುಷಿ ಭಾಗ್ಯ ನಾವಡ ಉಡುಪಿ ಸಹಕರಿಸಿದರು.
ಮುಖ್ಯ ಅತಿಥಿಗಳಾಗಿ ಸಿವಿಲ್ ಇಂಜಿನಿಯರ್ ರಾಘವೇಂದ್ರ ಕೆ.ಆತ್ರಾಡಿ, ಉಡುಪಿ-ಮಣಿಪಾಲ ರೋಟರಿಯ ಖಜಾಂಚಿ ಶ್ರೀಕಾಂತ್ ಪ್ರಭು, ವಿದುಷಿ ಪ್ರತಿಭಾ ಎಂ.ಎಲ್.ಸಾಮಗ, ಹೆಜ್ಜೆ ಗೆಜ್ಜೆ ಸಂಸ್ಥೆಯ ಸ್ಥಾಪಕ ವಿದುಷಿ ಯಶಾ ರಾಮಕೃಷ್ಣ ಉಪಸ್ಥಿತರಿದ್ದರು.
ರಜತ ಮಹೋತ್ಸವ ಸಮಿತಿಯ ಉಪಾಧ್ಯಕ್ಷ ಡಾ.ರಾಮಕೃಷ್ಣ ಹೆಗಡೆ ಸ್ವಾಗತಿಸಿ ದರು. ಪ್ರೊ.ಶ್ರೀನಾಥ್ ರಾವ್ ವಂದಿಸಿದರು. ಜ್ಯೋತಿ ಕಾರ್ಯಕ್ರಮ ನಿರೂ ಪಿಸಿದರು. ರಾಜ್ಯದ ವಿವಿಧ ಭಾಗಗಳಿಂದ 32 ಸ್ಪರ್ಧಾಳುಗಳು ಆಗಮಿಸಿದ್ದರು.