ರಸ್ತೆ ದುರಸ್ತಿಗೆ ಆಗ್ರಹ: ಕಸಬ ಬೆಂಗ್ರೆಯಲ್ಲಿ ಡಿವೈಎಫ್ಐಯಿಂದ ಧರಣಿ
ಮಂಗಳೂರು, ಆ.29: ಕಸಬ ಬೆಂಗ್ರೆ ರಸ್ತೆ ಹೊಂಡಮಯವಾಗಿದ್ದು, ನೀರು ತುಂಬಿಕೊಂಡಿದ್ದು, ಇದನ್ನು ದುರಸ್ತಿಪಡಿಸುವಂತೆ ಆಗ್ರಹಿಸಿ ಡಿವೈಎಫ್ಐ ಬೆಂಗ್ರೆ ಗ್ರಾಮ ಸಮಿತಿಯ ನೇತೃತ್ವದಲ್ಲಿ ಇಂದು ಬೆಳಗ್ಗೆ ಧರಣಿ ನಡೆಯಿತು.
ತಣ್ಣೀರುಬಾವಿಯಿಂದ ಬೆಂಗ್ರೆಗೆ ಹೋಗುವ ರಸ್ತೆ ದೊಡ್ಡ ಹೊಂಡಗಳಿಂದ ಕೂಡಿದ್ದು, ವಾಹನಗಳ ಸಂಚಾರಕ್ಕೆ ತೊಡಕುಂಟಾಗುತ್ತಿದೆ. ಇದರ ದುರಸ್ತಿಗೆ ಆಗ್ರಹಿಸಿ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದ ಧರಣಿನಿರತರು ಇಂದು ರಸ್ತೆ ಹೊಂಡಗಳಲ್ಲಿ ಗಿಡಗಳನ್ನು ನೆಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಡಿವೈಎಫ್ಐ ಬೆಂಗರೆ ಗ್ರಾಮ ಸಮಿತಿಯ ಅಧ್ಯಕ್ಷ ಎ.ಬಿ.ನೌಶಾದ್, ಕಾರ್ಯದರ್ಶಿ ಹನೀಫ್ ಬೆಂಗರೆ, ಅಸ್ಲಂ, ನಾಸಿರ್, ಸಮದ್ ಮತ್ತಿತರರು ಭಾಗಿಯಾಗಿದ್ದರು.
Next Story