ಲಾರಿ ಢಿಕ್ಕಿ: ಬೈಕ್ ಸವಾರ ಮೃತ್ಯು
ಕೋಟ, ಆ.29: ಶಿರಿಯಾರ ಗ್ರಾಮದ ಶಾಂತಮೂರ್ತಿ ಶನೀಶ್ವರ ದೇವ ಸ್ಥಾನದ ಸಮೀಪ ಆ.28ರಂದು ರಾತ್ರಿ 8:45ರ ಸುಮಾರಿಗೆ ಲಾರಿಯೊಂದು ಬೈಕ್ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಸತೀಶ್ ನಾಯ್ಕ ಎಂದು ಗುರುತಿಲಾಗಿದೆ. ಸಾಯಿಬರಕಟ್ಟೆ ಕಡೆಯಿಂದ ಮಂದರ್ತಿ ಕಡೆಗೆ ಹೋಗುತ್ತಿದ್ದ ಬೈಕ್ಗೆ ಎದುರಿನಿಂದ ಬರುತ್ತಿದ್ದ ಲಾರಿ ಢಿಕ್ಕಿ ಹೊಡೆಯಿತು. ಇದರಿಂದ ಸತೀಶ್ ನಾಯ್ಕಿ ಬೈಕ್ ಸಮೇತ ರಸ್ತೆಗೆ ಬಿದ್ದರೆನ್ನಲಾಗಿದೆ. ಈ ವೇಳೆ ಲಾರಿಯ ಹಿಂದಿನ ಚಕ್ರ ಸತೀಶ್ ನಾಯ್ಕೆರ ತಲೆಯ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story