ಗೂಡ್ಸ್ಟೆಂಪೊ- ಕಾರು ಢಿಕ್ಕಿ: ಚಾಲಕನಿಗೆ ಗಾಯ
ಮಂಗಳೂರು, ಸೆ.2: ಗೂಡ್ಸ್ಟೆಂಪೊಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಗೂಡ್ಸ್ಟೆಂಪೊ ಚಾಲಕ ಗಾಯಗೊಂಡ ಘಟನೆ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ರವಿವಾರ ನಡೆದಿದೆ.
ಉಳ್ಳಾಲ ನಿವಾಸಿ, ಗೂಡ್ಸ್ಟೆಂಪೊ ಚಾಲಕ ಅಬ್ದುಲ್ಲಾ (75) ಗಾಯಗೊಂಡವರು.
ತೊಕ್ಕೊಟ್ಟುವಿನಿಂದ ಮಂಗಳೂರಿಗೆ ಹೊರಟಿದ್ದ ಗೂಡ್ಸ್ಟೆಂಪೊಗೆ ಅದೇ ಮಾರ್ಗವಾಗಿ ಮಂಗಳೂರಿನ ಸಲ್ಡಾನ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರೊಂದು ಹಿಂದಿನಿಂದ ಢಿಕ್ಕಿ ಹೊಡೆದಿದೆ. ಪರಿಣಾಮ ಗೂಡ್ಸ್ಟೆಂಪೊ ಚಾಲಕ ಅಬ್ದುಲ್ಲಾ ಗಾಯಗೊಂಡಿದ್ದಾರೆ. ಕೂಡಲೇ ಗಾಯಾಳುವನ್ನು ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.
ಈ ಕುರಿತು ಮಂಗಳೂರು ಸಂಚಾರ ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story