ಸೆ.23: ಉಚಿತ ಆರೋಗ್ಯ ತಪಾಸಣೆ ಶಿಬಿರ
ಉಡುಪಿ, ಸೆ.22: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯ ತಜ್ಞ ವೈದ್ಯರು ಹಾಗೂ ತಂಡ, ಹಂಗಾರಕಟ್ಟೆಯ ಬಾಳೆಕುದ್ರು ಮಠದ ಸಹಯೋಗದೊಂದಿಗೆ ಮಾಬುಕಳ-ಹಂಗಾರಕಟ್ಟೆ ಪರಿಸರದ ಸಾರ್ವಜನಿಕರಿ ಗಾಗಿ ಉಚಿತ ಆಯುರ್ವೇದ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಸೆ.23ರ ಅಪರಾಹ್ನ 2:30ರಿಂದ ಸಂಜೆ 6:30ರವರೆಗೆ ಹಂಗಾರಕಟ್ಟೆ ಸಭಾಭವನದಲ್ಲಿ ಹಮ್ಮಿಕೊಂಡಿದೆಯ.
ಶಿಬಿರವನ್ನು ಬಾಳೆಕುದ್ರು ಮಠದ ಶ್ರೀನೃಸಿಹಾಶ್ರಮ ಸ್ವಾಮೀಜಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಎಸ್ಡಿಎಂ ಕಾಲೇಜಿನ ವೈದ್ಯಕೀಯಅಧೀಕ್ಷಕಿ ಡಾ.ಮಮತಾ ನವೀನ್ ವಹಿಸಲಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
Next Story