ಶಿರಾಡಿ-ಸಂಪಾಜೆ: ಘನ ವಾಹನ ಸಂಚಾರಕ್ಕೆ ಸಮಯ ನಿಗದಿಗೊಳಿಸಲು ಡಿಸಿಗೆ ಖಾದರ್ ಸೂಚನೆ
ಮಂಗಳೂರು, ಸೆ.23: ಶಿರಾಡಿ ಮತ್ತು ಸಂಪಾಜೆಯಲ್ಲಿ ಘನ ವಾಹನಗಳ ಸುಗಮ ಸಂಚಾರಕ್ಕಾಗಿ ಸೂಕ್ತ ಸಮಯ ನಿಗದಿಗೊಳಿಸಲು ದ.ಕ. ಜಿಲ್ಲಾಧಿಕಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸೂಚನೆ ನೀಡಿದ್ದಾರೆ.
ಈ ಎರಡೂ ಘಾಟ್ ರಸ್ತೆಯ ಮೂಲಕ ಬಸ್ ಸಹಿತ ಇತರ ಘನ ವಾಹನಗಳು ಬೇಕಾಬಿಟ್ಟಿಯಾಗಿ ಸಂಚರಿಸಿದರೆ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದೆ. ಅದನ್ನು ತಪ್ಪಿಸುವ ಸಲುವಾಗಿ ಯಾವ್ಯಾವ ವಾಹನಗಳು ಯಾವ ಸಮಯದಲ್ಲಿ ಸಂಚರಿಸಬೇಕು ಎಂಬುದರ ಬಗ್ಗೆ ವಿಸ್ತೃತ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿರುವುದಾಗಿ ಸಚಿವ ಖಾದರ್ ತಿಳಿಸಿದ್ದಾರೆ.
Next Story