ಕುಂತೂರಿನಲ್ಲಿ ಸರಣಿ ಆಪಘಾತ: ಓರ್ವನಿಗೆ ಗಾಯ
ಕಡಬ, ನ.9: ಮಾರುತಿ ರಿಟ್ಝ್ ಕಾರು, ಯಮಹಾ ಎಫ್ಝೆಡ್ ಬೈಕ್ ಹಾಗೂ ಸ್ಕೂಟಿಯೊಂದರ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಂತೂರು ಎಂಬಲ್ಲಿ ಶುಕ್ರವಾರ ನಡೆದಿದೆ.
ಉಪ್ಪಿನಂಗಡಿಯಿಂದ ಕಡಬ ಕಡೆಗೆ ತೆರಳುತ್ತಿದ್ದ ರಿಟ್ಝ್ ಕಾರು ಮತ್ತು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಎಫ್ಝೆಡ್ ಬೈಕ್ ಮತ್ತು ಸ್ಕೂಟಿಯೊಂದರ ನಡುವೆ ಕುಂತೂರು ಕೋಚಕಟ್ಟೆ ಮಧ್ಯದ ಸೇತುವೆಯ ಮೇಲೆ ಅಪಘಾತ ಸಂಭವಿಸಿದೆ.
ಇದರಿಂದ ಬೈಕ್ ಸವಾರ ಕುಂತೂರು ಪದವು ನಿವಾಸಿ ಪ್ರವೀಣ್ ಕೆ.ಆರ್. ಎಂಬವರು ಗಾಯಗೊಂಡಿದ್ದಾರೆ. ಅವರನ್ನು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ
Next Story