ನಿಸ್ವಾರ್ಥ ಸೇವೆಯಿಂದ ಸಮಾಜದ ಅಭಿವೃದ್ಧಿ: ಶಿವರಾಜು
'ಆಳ್ವಾಸ್ ನುಡಿಸಿರಿ' ವಿಶೇಷ ಉಪನ್ಯಾಸ ‘ಸಮಾಜಾಭಿವೃದ್ಧಿಯಲ್ಲಿ ವ್ಯಕ್ತಿ ಹೊಣೆಗಾರಿ’
ಮೂಡುಬಿದಿರೆ, ನ.17: ಇಂದಿನ ಪೋಷಕರು ಮಕ್ಕಳನ್ನು ದುಡಿಯುವ ಯಂತ್ರದ ಹಾಗೆ ಶಿಕ್ಷಣವನ್ನು ನೀಡುತ್ತಿದ್ದಾರೆ. ಹೊರತು ಮೌಲ್ಯಯುತ ಶಿಕ್ಷಣ ಕೊಡೆಸುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಪ್ರೊ. ಜಿ.ಬಿ.ಶಿವರಾಜು ವಿಷಾದ ವ್ಯಕ್ತಪಡಿಸಿದ್ದಾರೆ.
ಶನಿವಾರ ರತ್ನಾಕರವರ್ಣಿ ವೇದಿಕೆ, ಸಂತ ಶಿಶುನಾಳ ಶರೀಫ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಆಳ್ವಾಸ್ ನುಡಿಸಿರಿ-2018 ಕಾರ್ಯಾಕ್ರಮದ ವತಿಯಿಂದ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು. ಒಂದು ದೇಶ ಅಭಿವೃದ್ಧಿಯತ್ತ ಸಾಗಬೇಕೆಂದರೆ ಯುವಕರ ಪಾತ್ರ ಬಹುಮುಖ್ಯ. ಹಾಗಾಗಿ ಇಂದಿನ ಯುವಕರಿಗೆ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಪ್ರತಿ ವ್ಯಕ್ತಿಯ ಕೆಲಸ ಏನು ಎಂಬುದನ್ನು ಮನವರಿಕೆ ಮಾಡಿಕೊಂಡು ದೇಶ ಅಭಿವೃದ್ಧಿ ಪತದ ಕಡೆಗೆ ಸಾಗುವಲ್ಲಿ ಸಾದ್ಯ ಎಂದು ಅಭಿಪ್ರಾಯ ಪಟ್ಟರು.
ಇಂದು ಯುವಕರು ಸಾಮಾಜಿಕ ಜಾಲತಾಣಗಳಿಗೆ ಮಾರುಹೋಗುತ್ತಿದ್ದು, ಬದುಕಿನ ಮೌಲ್ಯಗಳನ್ನು ಮರೆಯುತ್ತಿದ್ದಾರೆ. ಹಿರಿಯರು ಹಾಕಿಕೊಟ್ಟ ಸಂಸ್ಕೃತಿ, ಪರಂಪರೆಯನ್ನು ನಾವು ಉಳಿಸಿಕೊಂಡು ಹೋಗುವ ಜವಬ್ದಾರಿಯನ್ನು ಯುವಕರು ಮರೆಯುತ್ತಿದ್ದಾರೆ. ಹಾಗಾಗಿ ಹಿರಿಯರು ಮಾಡಿದಂತೆ ಸಾಧನೆಯ ಬಗ್ಗೆ ಪೋಷಕರು ಮಕ್ಕಳಿಗೆ ತಿಳಿಸದಿದ್ದರೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ‘ಜಪಾನ ಅಂತಾ ದೇಶ ಅಭಿವೃದ್ಧಿ ಹೊಂದಲು ಕಾರಣ ಅಲ್ಲಿನ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದಲೇ ಪೂರ್ವಜರ ಸಾಧನೆಯ ಬಗ್ಗೆ ಮಾಹಿತಿ, ದೇಶದ ಆರ್ಥಿಕತೆ, ಅಭಿವೃದ್ಧಿ ಬಗ್ಗೆ ತಿಳಿ ಹೇಳುತ್ತಾರೆ. ಆದ್ದರಿಂದ ಜಪಾನ ದೇಶ ಅಭಿವೃದ್ಧಿ ಪಥದಲ್ಲಿದೆ ಎಂದು ಮಾಹಿತಿ ನೀಡಿದರು.
ನಿಸ್ವಾರ್ಥ ಸೇವೆಯಿಮದ ಸಮಾಜದ ಅಭಿವೃದ್ಧಿ ಸಾಧ್ಯ. ಮಾನವೀಯ ಮೌಲ್ಯಗಳ ಇಲ್ಲದ ವ್ಯಕ್ತಿ ಪ್ರಾಣಿಗಿಂತ ಕಡಿ ಇದ್ದಂತೆ. ನಾವೆಲ್ಲರೂ ಸಮಾಜದ ಟ್ರಸ್ಟಿಗಳಿದ್ದಂತೆ, ನಮಗಾಗಿ ಬದುಕದೆ ಬೇರೆಯವರಿಗಾಗಿ ಬದುಕುವುದೇ ನಿಜವಾದ ಜೀವನ. ಕೆಲವರು ಸತ್ತಾಗ ಗೊತ್ತಾಗುತ್ತೆ ಅವರು ಬದುಕಿದ್ದರು ಎಂದು, ಹಾಗಾಗಿ ನಾವು ಜೀವನದಲ್ಲಿ ಸಮಾಜಕ್ಕೆ ಏನನ್ನಾದರೂ ಕೊಡುಗೆಯನ್ನು ನೀಡಬೇಕು ಎಂಬ ಹಂಬಲ ಯುವಕರಲ್ಲಿ ಮೂಡಬೇಕು ಅಂದಾಗ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಸಲಹೆ ನೀಡಿದರು.
ಸಮಾಜದ ಹೊಣೆಗಾರಿಕೆಯನ್ನು ನಾವು ಮುಂದುವರಿಸಿಕೊಂಡು ಹೋಗಬೇಕು. ಇಂದು ತರಗತಿಗಳಲ್ಲಿ ಜಾತಿ ಪ್ರವೇಶದ ಮೇಲೆ ಎತ್ತುಕಟ್ಟಿ ವಿದ್ಯಾರ್ಥಿಗಳ ಸುಂದರ ಬದುಕನ್ನು ಹಾಳು ಮಾಡುತ್ತಿದ್ದಾರೆ ಶಿಕ್ಷಕರು ಎಂದು ಹೇಳಿದರು. ಈ ಸಂದರ್ಭ ನುಡಿಸಿರಿಯ ಸರ್ವಾಧ್ಯಕ್ಷರಾದ ಮಲ್ಲಿಕಾ ಘಂಟಿ, ಉಪಾಧ್ಯಕ್ಷ, ಸಾಹಿತಿ ದಾಮೋದರ ಶೆಟ್ಟಿ ಸೇರಿದಂತೆ ಇತರರಿದ್ದರು.
‘ಪುಸ್ತಕದ ಜ್ಞಾನ ಶಿಕ್ಷಣವಲ್ಲ’
ಇಂದು ನಾವು ಮಕ್ಕಳಿಗೆ ಕೇವಲ ಪುಸ್ತಕ ಜ್ಞಾನವನ್ನು ನೀಡುತ್ತಿದ್ದೇವೆ ಹೊರತು ಬದುಕಿನ ಮೌಲ್ಯಗಳನ್ನು ನೀಡುತ್ತಿಲ್ಲ. ಶಿಕ್ಷಣ ಎನ್ನುವುದು ವಿಷಯ ಸಂಗ್ರಹವಲ್ಲ ಪ್ರಪಂಚದಲ್ಲಿ ಜನ್ಮ ತಾಳಿರುವ ಎಲ್ಲ ಹೃದಯಗಳಲ್ಲಿ ಹೊಂದಿಕೊಂಡು ಹೋಗುವಂತೆ ನಮ್ಮ ಹೃದಯವನ್ನು ಹದಗೊಳಿಸುವುದೇ ನಿಜವಾದ ಶಿಕ್ಷಣ ಎಂದು ರವೀಂದ್ರನಾಥ ಟ್ಯಾಗೋರ್ ಹೇಳಿದ್ದಾರೆ ಎಂದು ಪ್ರೊ. ಶಿವರಾಜು ಹೇಳಿದರು.