ಪಡುಬಿದ್ರಿ: ಬಾವಿಗೆ ಬಿದ್ದು ಕಾರ್ಮಿಕ ಸಾವು
ಪಡುಬಿದ್ರಿ, ನ. 21: ಬಾವಿಗೆ ಬಿದ್ದು ಕಾರ್ಮಿಕನೋರ್ವ ಸಾವುಗೀಡಾದ ಘಟನೆ ಬುಧವಾರ ಮಧ್ಯಾಹ್ನ ಪಾದೆಬಟ್ಟುವಿನಲ್ಲಿ ನಡೆದಿದೆ.
ಮೃತ ಕಾರ್ಮಿಕನ್ನು ಪಾದೆಬೆಟ್ಟು ನಿವಾಸಿ ಕರುಣಾಕರ ಪೂಜಾರಿ (55) ಎಂದು ಗುರುತಿಸಲಾಗಿದೆ.
ಇವರು ಇಂದು ರಾಜ್ಯ ಹೆದ್ದಾರಿಯ ಕಂಚಿನಡ್ಕದ ಪೆಟ್ರೋಲ್ ಬಂಕ್ ಬಳಿ ಮರದ ಕೆಲಸ ಮಾಡುತಿದ್ದಾಗ ಅಯ ತಪ್ಪಿ ಸಮೀಪದಲ್ಲಿದ್ದ ಬಾವಿಗೆ ಬಿದ್ದು ಮೃತಪಟ್ಟರು. ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story