ಕೊಲ್ಲರಕೋಡಿ: ಎಸ್ಸೆಸ್ಸೆಫ್ ಮಹಾಸಭೆ, ಪದಾಧಿಕಾರಿಗಳ ಆಯ್ಕೆ
ನರಿಂಗಾನ, ನ.23: ಎಸ್ಸೆಸ್ಸೆಫ್ ಕೊಲ್ಲರಕೋಡಿ ಘಟಕದ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆಯು ಕೊಲ್ಲರಕೋಡಿಯ ನೂರುಲ್ ಹುದಾ ಮಸ್ಜಿದ್ ತಖ್ವಾದಲ್ಲಿ ಶಾಖಾ ಅಧ್ಯಕ್ಷ ಅನೀಸ್ ಬಳಪು ಅವರ ಅಧ್ಯಕ್ಷತೆಯಲ್ಲಿ ಇತ್ತಿಚೆಗೆ ನಡೆಯಿತು. ಶಬೀರ್ ಮೀನಂಗೋಡಿ ವರದಿ ಮಂಡಿಸಿದರು.
ನೂತನ ಅಧ್ಯಕ್ಷರಾಗಿ ಆಸಿಫ್ ಕೆ.ಎಚ್, ಉಪಾಧ್ಯಕ್ಷರುಗಳಾಗಿ ಸಾಬಿತ್ ಪಾರೆ, ಜಲೀಲ್ ಎನ್.ಎಮ್. ಪ್ರಧಾನ ಕಾರ್ಯದರ್ಶಿಯಾಗಿ ಶಬೀರ್. ಜೊತೆ ಕಾರ್ಯದರ್ಶಿಗಳಾಗಿ ಆಮಿರ್, ಹೈದರ್ ಪಲ್ಲ. ಕೋಶಾಧಿಕಾರಿಯಾಗಿ ಅನೀಸ್ ಬಳಪು, ಎಸ್.ಬಿ.ಎಸ್ ಉಸ್ತುವಾರಿಯಾಗಿ ಶಹೀರ್ ಎನ್.ಎಮ್. ಇಶಾರ ವ್ಯವಸ್ಥಾಪಕರಾಗಿ ನೌಫಲ್ ಎಚ್ ಆಯ್ಕೆಯಾದರು.
ಈ ಸಂದರ್ಭ ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ಅಧ್ಯಕ್ಷ ಇಬ್ರಾಹೀಂ ಅಹ್ಸನಿ, ಮುಹಮ್ಮದ್ ಎನ್.ಐ, ಶಾಕಿರ್ ಎನ್.ಎಮ್ ಮೊದಲಾದವರು ಉಪಸ್ಥಿತರಿದ್ದರು.
Next Story