ಗಾಂಜಾ ಸೇವನೆ: ಇಬ್ಬರು ಆರೋಪಿಗಳು ವಶಕ್ಕೆ
ಬ್ರಹ್ಮಾವರ, ನ.30: ಹಾರಾಡಿ ಗ್ರಾಮದ ಹೊನ್ನಾಳ ಹೊಳೆಬದಿ ಮದ್ರಸ ಬಳಿ ನ.29ರಂದು ಬೆಳಗ್ಗೆ ಗಾಂಜಾ ಸೇವಿಸುತ್ತಿದ್ದ ಇಬ್ಬರನ್ನು ಬ್ರಹ್ಮಾವರ ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ.
ಗಾಂಜಾ ಸೇವಿಸಿದ್ದ ಹೊನ್ನಾಳದ ರೆಹಮತ್ ಜಿಯಾರ್(20) ಹಾಗೂ ಬ್ರಹ್ಮಾವರದ ಮುಹಮ್ಮದ್ ಫಜಲ್(19) ಎಂಬವರು ಮಣಿಪಾಲ ಕೆಎಂಸಿ ಆಸ್ಪತ್ರೆಯ ಪೊರೆನ್ಸಿಕ್ ಮೆಡಿಸಿನ್ ವಿಭಾಗದ ತಜ್ಞರ ಮುಂದೆ ಹಾಜರು ಪಡಿ ಸಿದ್ದು, ಇವರಿಬ್ಬರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story