ಮಂಗಳೂರು : ಎಸ್.ವೈ.ಎಸ್ ದ.ಕ. ಜಿಲ್ಲೆ :ಎ.12ರಂದು ನಾಯಕತ್ವ ತರಬೇತಿ ಶಿಬಿರ
ಮಂಗಳೂರು, ಎ.8: ಕರ್ನಾಟಕ ರಾಜ್ಯ ಸುನ್ನೀ ಯುವ ಜನ ಸಂಘ ಎಸ್ ವೈಎಸ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಎ. 12 ರಂದು ತೊಕ್ಕೊಟ್ಟು ಯುನಿಟಿ ಹಾಲ್ನಲ್ಲಿ ಇಸ್ಲಾಮಿನಲ್ಲಿ ನಾಯಕತ್ವ ಎಂಬ ವಿಷಯದಲ್ಲಿ ತರಬೇತಿ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಬ್ರಾಂಚ್ನ ಪದಾಧಿಕಾರಿಗಳು, ಸೆಂಟರ್ನ ಕಾರ್ಯಕಾರಿ ಸದಸ್ಯರು, ಮತ್ತು ಜಿಲ್ಲಾ ಕೌನ್ಸಿಲರ್ಸ್ಗಳು ಸೇರಿ ಒಂದು ಸಾವಿರ ಎಸ್ ವೈಎಸ್ ಕಾರ್ಯಕರ್ತರು ಭಾಗವಹಿಸಲಿದ್ದಾರೆ.
ತರಬೇತುದಾರರಾಗಿ ಕೇರಳ ರಾಜ್ಯ ಎಸ್ ವೈಎಸ್ ಉಪಾಧ್ಯಕ್ಷ ಅಬ್ದುರ್ರಹ್ಮಾನ್ ದಾರಿಮಿ ಕೂಟಂಬಾರ ಆಗಮಿಸಲಿದ್ದಾರೆ. ಬೆಳಗ್ಗೆ 9ರಿಂದ ಸಂಜೆ 4 ಗಂಟೆಯ ತನಕ ಶಿಬಿರ ನಡೆಯಲಿದೆ.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಎಸ್ ವೈಎಸ್ ಜಿಲ್ಲಾಧ್ಯಕ್ಷ ಪಿ.ಎಂ. ಉಸ್ಮಾನ್ ಸಅದಿ ವಹಿಸಲಿದ್ದಾರೆ. ರಾಜ್ಯಾಧ್ಯಕ್ಷ ಕೆ.ಪಿ. ಹುಸೈನ್ ಸಅದಿ ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಸಖಾಫಿ ಮೂಳೂರು ಶಿಬಿರದ ಅಮೀರ್ ಕೆ.ಇ. ಸಾಲೆತ್ತೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story