ಮಂಗಳೂರು: ಕೇಂದ್ರ ಸರಕಾರದ ವಿರುದ್ಧ ಮಂಗಳಮುಖಿಯರಿಂದ ಪ್ರತಿಭಟನೆ
ಮಂಗಳೂರು, ಡಿ. 21: ಕೇಂದ್ರ ಸರಕಾರ ಲಿಂಗತ್ವ ಅಲ್ಪಸಂಖ್ಯಾತರ ವಿರುದ್ಧ ಮಸೂದೆ ಮಂಡಿಸಿದೆ ಎಂದು ನವ ಸಹಜ ಸಮುದಾಯ ಸಂಘಟನೆಯ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.
ರಾಜ್ಯಸಭೆಯಲ್ಲಿ ಟ್ರಾನ್ಸ್ ಬಿಲ್ 2018 ಮಂಡಿಸುವ ಮೂಲಕ ಮಂಗಳ ಮುಖಿಯರ ಮೇಲೆ ಪ್ರಹಾರ ಮಾಡಿದೆ ಎಂದು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದ ಮಂಗಳಮುಖಿಯರು ಕೂಡಲೇ ಮಸೂದೆ ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಯಾವುದೇ ಕಾರಣಕ್ಕೂ ಕೇಂದ್ರ ಸರಕಾರ ಈ ಮಸೂದೆಯನ್ನು ಜಾರಿಗೊಳಿಸಬಾರದು. ಮಂಗಳಮುಖಿಯರಿಗೆ ಪರವಾದ ಮಸೂದೆಯನ್ನೇ ಜಾರಿಗೆ ತರಬೇಕೆಂದು ಪ್ರತಿಭಟಿಸಿದರು.
ಈ ಸಂದರ್ಭ ಸಂಘಟನೆಯ ಪ್ರಮುಖರಾದ ಪ್ರೇಮ, ತ್ರಾಸಿ, ಅರುಂದತಿ, ನಯನ , ನಿಖಿಲ, ನಿಶಾ ಮತ್ತಿತರರು ಪಾಲ್ಗೊಂಡಿದ್ದರು.
Next Story