ಪತಿಯ ಕಿರುಕುಳದಿಂದ ಪತ್ನಿ ಆತ್ಮಹತ್ಯೆ: ದೂರು
ಕಾರ್ಕಳ, ಜ.8: ಕಾರ್ಕಳದ ಪತ್ತೊಂಜಿಕಟ್ಟೆ ಬಳಿ ಕಾಲೋನಿ ಎಂಬಲ್ಲಿ ಪತಿಯ ಕಿರುಕುಳದಿಂದ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರನ್ನು ಸಂಜನ ಅಲಿಯಾಸ್ ಜ್ಯೋತಿ (32) ಎಂದು ಗುರುತಿಸಲಾಗಿದೆ.
ಈಕೆ 2012ರಲ್ಲಿ ನಟರಾಜ ಯಾನೆ ನಟೇಶ್ ಎಂಬಾತನನ್ನು ಮದುವೆಯಾ ಗಿದ್ದು ತದನಂತರ ನಟೇಶ್ ಆಕೆರೆಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಕಿರುಕುಳ ನೀಡುತ್ತಿದ್ದ ಎಂದು ದೂರಲಾಗಿದೆ.
ಪತಿಯ ಕಿರುಕುಳವನ್ನು ತಾಳಲಾರದೆ ಜ್ಯೋತಿ ಜ.7ರಂದು ಅಪರಾಹ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಕೆಯ ಸಾವಿಗೆ ನಟೇಶ್ನ ಕಿರುಕುಳ ಹಾಗೂ ಪ್ರಚೋದನೆಯೇ ಕಾರಣ ಎಂದು ಮಣಿಯಮ್ಮ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
Next Story