ರೈಲು ಢಿಕ್ಕಿ: ಯುವಕನಿಗೆ ಗಂಭೀರ ಗಾಯ
ಉಡುಪಿ, ಜ.17: ಕುಕ್ಕಿಕಟ್ಟೆ ರೈಲು ಮಾರ್ಗದಲ್ಲಿ ಗಂಭೀರ ಸ್ವರೂಪದ ಗಾಯಗೊಂಡು ಅಸಹಾಯಕ ಸ್ಥಿತಿಯಲ್ಲಿದ್ದ ಯುವಕನೊಬ್ಬನನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲು ಪಡಿಸಿದ ಘಟನೆ ಗುರುವಾರ ಸಂಜೆ ನಡೆದಿದೆ.
ಗಾಯಾಳವನ್ನು ಇಂದ್ರಾಳಿ ನಿವಾಸಿ ಅಶೋಕ ಯಾನೆ ಪುಟ್ಟ(30) ಎಂದು ಗುರುತಿಸಲಾಗಿದೆ. ಇವರು ರೈಲು ಹಳಿ ಸಮೀಪ ನಡೆದುಕೊಂಡು ಕುಕ್ಕಿಕಟ್ಟೆಗೆ ಬರುತ್ತಿರುವಾಗ ಚಲಿಸುತ್ತಿರುವ ರೈಲು ಇವರಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರಿಂದ ಅಶೋಕ್ ಕಾಲು ಹಾಗೂ ಇತರ ಭಾಗಗಳಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರ ಸಹಕಾರ ದೊಂದಿಗೆ ಸಮಾಜಸೇವಕ ನಿತ್ಯಾನಂದ ಒಳಕಾಡು ಗಾಯಾಳನ್ನು ಆಸ್ಪತ್ರೆಗೆ ದಾಖಲಿಸಿದರು.
Next Story