ಪುತ್ತೂರು: ಓಮ್ನಿ ಕಾರಿಗೆ ಪಿಕಪ್ ಢಿಕ್ಕಿ; ಓರ್ವ ಮೃತ್ಯು
ಪುತ್ತೂರು, ಜ. 22: ಮುಕ್ವೆಯಲ್ಲಿ ಓಮ್ನಿ ಕಾರಿಗೆ ಪಿಕಪ್ ಢಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಓಮ್ನಿಯಲ್ಲಿ ದ್ದ ಓರ್ವ ಮೃತಪಟ್ಟು ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಗಾಯಾಳುವನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ವೀರಮಂಗಲದಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಓಮ್ನಿ ಹಾಗೂ ಮುಕ್ವೆಯಿಂದ ಪುರುಷರಕಟ್ಟೆಗೆ ಹೋಗುತ್ತಿದ್ದ ಪಿಕಪ್ ನಡುವೆ ಮುಕ್ವೆ ಮಸೀದಿ ಬಳಿ ಅಪಘಾತ ನಡೆದಿದೆ.
ಘಟನೆಯಿಂದಾಗಿ ಗಂಭೀರವಾಗಿ ಗಾಯಗೊಂಡ ಓಮ್ನಿಯಲ್ಲಿದ್ದ ವೀರಮಂಗಲ ನಿವಾಸಿ ಕೃಷ್ಣ ಭಟ್ ಎಂಬವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮೃತಪಟ್ಟಿದ್ದು ಹಾಗೂ ಅವರ ಪುತ್ರ ಅವಿನಾಶ್ ಭಟ್ ರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಪಿಕಪ್ ಚಾಲಕ ಹೊನ್ನಪ್ಪ ಗೌಡ ಗಾಯಗೊಂಡಿದ್ದು, ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಪುತ್ತೂರು ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.
Next Story